ದೇಶ

'ಭಾರತಕ್ಕೆ ಸಿಕ್ಕಿದ್ದಾರೆ ಹೊಸ ಸರ್ದಾರ್ ಪಟೇಲ್, ಕಾಶ್ಮೀರ ಕಲ್ಲು ತೂರಾಟಗಾರರೇ ಎಚ್ಚರ'!

Srinivas Rao BV
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೃಹ ಸಚಿವರಾಗಿ ನೇಮಕಗೊಳ್ಳುತ್ತಿದ್ದಂತೆಯೇ  ಕಾಶ್ಮೀರಿ ಕಲ್ಲು ತೂರಾಟಗಾರರಿಗೆ ಬಿಜೆಪಿ ಎಚ್ಚರಿಕೆ ನೀಡಿದೆ. 
ಬಿಜೆಪಿ ವಕ್ತಾರ ತಜಿಂದರ್ ಸಿಂಗ್ ಪಾಲ್ ಬಗ್ಗಾ ಟ್ವೀಟ್ ಮಾಡಿದ್ದು, ಅಮಿತ್ ಶಾ ಅವರನ್ನು ಸರ್ದಾರ್ ಪಟೇಲ್ ಅವರಿಗೆ ಹೋಲಿಕೆ ಮಾಡಿದ್ದಾರೆ. 
ಭಾರತಕ್ಕೆ ಹೊಸ ಸರ್ದಾರ್ ಪಟೇಲರು ಸಿಕ್ಕಿದ್ದಾರೆ. ಕಾಶ್ಮೀರದಲ್ಲಿರುವ ಕಲ್ಲು ತೂರಾಟಗಾರರೇ, ಅಕ್ರಮ ಬಾಂಗ್ಲಾ ವಲಸಿಗರೇ ಬ್ಯಾಗ್ ಪ್ಯಾಕ್ ಅಪ್ ಮಾಡಿ ಎಂದು ಬಗ್ಗಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗತೊಡಗಿದೆ.
SCROLL FOR NEXT