ಸಂಗ್ರಹ ಚಿತ್ರ 
ದೇಶ

ಇಷ್ಟಕ್ಕೂ ಏನಿದು ಪೆಗಾಸಸ್ ಸ್ಪೈವೇರ್?

ವಾಟ್ಸಪ್ ಮೂಲಕ ಗೂಢಚರ್ಯೆ ಮಾಡಲು ಕೇಂದ್ರ ಸರ್ಕಾರ ಇಸ್ರೇಲ್ ನೆರವು ಪಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕಾಗಿ ಪೆಗಾಸಸ್ ಎಂಬ ಸ್ಪೈವೇರ್ ಬಳಕೆ ಮಾಡುತ್ತಿದೆ ಎನ್ನಲಾಗಿದೆ. ಆದರೆ ಇಷ್ಟಕ್ಕೂ ಏನಿದು ಪೆಗಾಸಸ್ ಸ್ಪೈವೇರ್.. ಇದಕ ಕೆಲಸವೇನು..? ಇಲ್ಲಿದೆ ಮಾಹಿತಿ..

ನವದೆಹಲಿ: ವಾಟ್ಸಪ್ ಮೂಲಕ ಗೂಢಚರ್ಯೆ ಮಾಡಲು ಕೇಂದ್ರ ಸರ್ಕಾರ ಇಸ್ರೇಲ್ ನೆರವು ಪಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕಾಗಿ ಪೆಗಾಸಸ್ ಎಂಬ ಸ್ಪೈವೇರ್ ಬಳಕೆ ಮಾಡುತ್ತಿದೆ ಎನ್ನಲಾಗಿದೆ. ಆದರೆ ಇಷ್ಟಕ್ಕೂ ಏನಿದು ಪೆಗಾಸಸ್ ಸ್ಪೈವೇರ್.. ಇದಕ ಕೆಲಸವೇನು..? ಇಲ್ಲಿದೆ ಮಾಹಿತಿ..

ಪೆಗಾಸಸ್ ಎಂಬುದು ಸ್ಪೈವೇರ್ ಆಗಿದ್ದು, ಎನ್ಎಸ್ಓ ಗ್ರೂಪ್ ಇದನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಇದೇ ಸ್ಪೈವೇರ್ ಅನ್ನು ಬಳಕೆ ಮಾಡಿಕೊಂಡು ವಿಶ್ವದ ಹಲವು ದೇಶಗಳ ಸರ್ಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಡಚರ್ಯೆ ನಡೆಸಲಾಗುತ್ತಿದೆ ಎನ್ನಲಾಗಿದೆ. 

Pegasus ಎಂಬ ಸ್ಪೈವೇರ್ ಗ್ರಾಹಕನಿಗೆ ಗೊತ್ತಿಲ್ಲದೆ ತಮ್ಮ ಸ್ಮಾರ್ಟ್ ಫೋನುಗಳಲ್ಲಿ ಇನ್ ಸ್ಟಾಲ್ ಆಗುತ್ತದೆ. ಆದ ನಂತರ ಗೂಢಚರ್ಯೆ ನಡೆಸುವ ಸಂಸ್ಥೆಯು ಆ ಮೊಬೈಲ್ ಫೋನಿನಲ್ಲಿ ಇರುವ ಪಾಸ್ ವರ್ಡ್, ಕಾಂಟಾಕ್ಟ್, ಕ್ಯಾಲೆಂಡರ್ ಇವೆಂಟ್, ಟೆಕ್ಸ್ಟ್ ಸಂದೇಶ ಇತ್ಯಾದಿ ಎಲ್ಲ ಖಾಸಗಿ ಮಾಹಿತಿ ಪಡೆಯುತ್ತದೆ. ಮಾತ್ರವಲ್ಲದೆ, ಮೊಬೈಲಿನ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸಿ ಇನ್ನಿತರ ಮಾಹಿತಿಯನ್ನು ಕೂಡ ಸಂಗ್ರಹಿಸಬಹುದಾಗಿದೆ. ಒಂದು ಆಕರ್ಷಕವಾದ ಟೆಕ್ಸ್ಟ್ ಸಂದೇಶದ ಮೂಲಕ ಈ ಸ್ಪೈ ವೇರ್ ಅನ್ನು ಮೊಬೈಲ್ ಗೆ ಕಳುಹಿಸಲಾಗುತ್ತದೆ. ಸಂದೇಶವನ್ನು ಓಪನ್ ಮಾಡಿದಾಗ ಈ ಸ್ಪೈವೇರ್ ಮೊಬೈಲಿನಲ್ಲಿ ಸೇರಿಕೊಂಡು ಇನ್ ಸ್ಟಾಲ್ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾವೆಲ್ಲಾ ದೇಶಗಳಿಂದ ಬಳಕೆ
ಇನ್ನು ಜಗತ್ತಿನ ಹಲವು ದೇಶಗಳು ಈ ಪೆಗಾಸಸ್ ಸ್ಪೈವೇರ್ ಬಳಕೆ ಮಾಡುತ್ತಿದ್ದು, ಈ ಪೈಕಿ ವಿಶ್ವದಲ್ಲೇ ಮೆಕ್ಸಿಕೊ ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ವ್ಯವಸ್ಥೆ ಈ ಇಸ್ರೇಲಿ ಸೈಬರ್ ಗೂಢಚರ್ಯೆ ಕೃತ್ಯ ನಡೆದಿತ್ತು. ಅಲ್ಲಿನ ಸರ್ಕಾರ 2016-17ರಿಂದ ಅಂದಾಜು 220 ಕೋಟಿ ರೂಪಾಯಿ ವೆಚ್ಚ ಮಾಡಿ 500ಕ್ಕೂ ಹೆಚ್ಚು ಮಂದಿಯ ಫೋನ್ ಗಳನ್ನು ಗೂಢಚರ್ಯೆ ನಡೆಸಿತ್ತು ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT