ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಕಾಮಾಂಧ ಶಿಕ್ಷಕರು! 
ದೇಶ

ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಕಾಮಾಂಧ ಶಿಕ್ಷಕರು! 

ಒಳಿತು ಕೆಡುಕುಗಳನ್ನು ಮಕ್ಕಳಿಗೆ ತಿಳಿಸುವ ಶಿಕ್ಷಕರೇ ಮೃಗೀಯ ವರ್ತನೆ ತೋರಿದ್ದು, ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. 

ಪಾಲಂಪುರ್: ಒಳಿತು ಕೆಡುಕುಗಳನ್ನು ಮಕ್ಕಳಿಗೆ ತಿಳಿಸುವ ಶಿಕ್ಷಕರೇ ಮೃಗೀಯ ವರ್ತನೆ ತೋರಿದ್ದು, ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. 

ಗುಜರಾತ್ ನ ಪಾಲಂಪುರದಲ್ಲಿ ಇಬ್ಬರು ಅಂಧ ಶಿಕ್ಷಕರು 15 ವರ್ಷದ ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. 

ಟೆಂಪಲ್ ಟೌನ್ ಎಂದೇ ಖ್ಯಾತವಾಗಿರುವ ಅಂಬಾಜಿಯಲ್ಲಿ ಖಾಸಗಿ ಟ್ರಸ್ಟ್ ನಿಂದ ನಡೆಸುತ್ತಿರುವ ಶಾಲೆಯಲ್ಲಿ ಅಂಧ ಬಾಲಕಿಯ ಮೇಲೆ ಸತತ 4 ತಿಂಗಳ ಕಾಲ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಅತ್ಯಾಚಾರದ ಸಂತ್ರಸ್ತ ಬಾಲಕಿ ತನ್ನ ಸೋದರ ಸಂಬಂಧಿಗೆ ತನ್ನ ಮೇಲೆ ಶಿಕ್ಷಕರೇ ಅತ್ಯಾಚಾರವೆಸಗಿರುವ ಘಟನೆಗಳನ್ನು ತಿಳಿಸಿದ್ದಾಳೆ. ಈ ಆಧಾರದ ಮೇಲೆ ದೂರು ದಾಖಲಾಗಿದ್ದು, ಶಿಕ್ಷಕರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ. 

ದೀಪಾವಳಿ ರಜೆ ಮುಗಿದ ಬಳಿಕ ಶಾಲೆಗೆ ಹೋಗಲು ಬಾಲಕಿ ಹಿಂದೇಟು ಹಾಕುತ್ತಿದ್ದಳು. ಇದರಿಂದ  ಆತಂಕಕ್ಕೊಳಗಾದ ಪೋಷಕರು ಕಾರಣವನ್ನು ವಿಚಾರಿಸಿದ್ದಾರೆ. ಕಣ್ಣೀರಿಟ್ಟ ಬಾಲಕಿ ತನ್ನ ಮೇಲೆ ಶಾಲೆಯಲ್ಲಿ ಚಮನ್ ಠಾಕೂರ್ (62)  ಜಯಂತಿ ಠಾಕೂರ್ (30) ಎಂಬ ಇಬ್ಬರು ಶಿಕ್ಷಕರು ಅತ್ಯಾಚಾರ ನಡೆದಿರುವುದನ್ನು ವಿವರಿಸಿದ್ದಾಳೆ. 

ತನ್ನ ಗ್ರಾಮದ ಶಾಲೆಯಲ್ಲಿ 8 ನೇ ತರಗತಿಯ ವರೆಗೂ ಕಲಿತಿದ್ದ ವಿದ್ಯಾರ್ಥಿನಿ ಅಂಬಾಜಿಯಲ್ಲಿ ಖಾಸಗಿ ಟ್ರಸ್ಟ್ ನಿಂದ ನಡೆಸುತ್ತಿರುವ ಶಾಲೆಯಲ್ಲಿ ಸಂಗೀತ ಕಲಿಯುವುದಕ್ಕೆ ಸೇರಿದ್ದಳು. ಈ ವೇಳೇ ಸಂಗೀತ ಕಲಿಸುವ ಕೋಠಡಿಯಲ್ಲಿ ಜಯಂತಿ ಠಾಕೂರ್ ಎಂಬುವವರು ಬಾಲಕಿಯ ಮೇಲೆ 2 ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದಾರೆ. ನಂತರ ಅದೇ ಕೊಠಡಿಯಲ್ಲಿ ಚಮಾನ್ ಠಾಕೂರ್ ನಿಂದಲೂ ಅತ್ಯಾಚಾರ ನಡೆದಿದೆ. 

ಈ ಬಳಿಕ ತನ್ನ ಪರಿಸ್ಥಿತಿಯನ್ನು ಇತರ ಮೂವರು ಶಿಕ್ಷಕರಿಗೆ ತಿಳಿಸಿದ ನಂತರ ತನ್ನ ಮೇಲಿನ ಲೈಂಗಿಕ ಕಿರುಕುಳ ನಿಂತಿದೆ ಎಂದು ಬಾಲಕಿ ಹೇಳಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT