ದೇಶ

ಹೋರಿ ಕಣ್ಣು ರೇಣುಕಾಚಾರ್ಯ ಮ್ಯಾಲೆ!: ಹೋರಿ ತಿವಿತದಿಂದ ರೇಣುಕಾಚಾರ್ಯ ಜಸ್ಟ್ ಮಿಸ್! 

Srinivas Rao BV

ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಟೈಮೇ ಸರಿ ಇಲ್ಲ ಎನಿಸುತ್ತದೆ. ಇತ್ತೀಚೆಗಷ್ಟೇ ಹೋರಿಯಿಂದ ತಿವಿಸಿಕೊಂಡಿದ್ದ ರೇಣುಕಾಚಾರ ಈಗ ಮತ್ತೊಂದು ಅಂಥದ್ದೇ ಘಟನೆಯಲ್ಲಿ ಪಾರಾಗಿದ್ದಾರೆ.

ಹೊನ್ನಾಳಿಯಲ್ಲಿ ಹೋರಿ ಬೆದರಿಸುವ ಹಬ್ಬದಲ್ಲಿ ಭಾಗಿಯಾಗಿದ್ದ ಎಂಪಿ ರೇಣುಕಾಚಾರ್ಯ, ಹೋರಿಗಳ ಬಳಿ ತೆರಳಿದಾಗ ಈ ಘಟನೆ ನದೆದಿದೆ. ಶಾಸಕರು ಹೋರಿಯನ್ನು ಮುಟ್ಟಲು ಹೋಗುತ್ತಿದ್ದಂತೆಯೇ ತಿವಿಯಲು ಬಂದಿದೆ. ತಕ್ಷಣವೇ ಎಚ್ಚೆತ್ತ ಸ್ಥಳದಲ್ಲಿದ್ದವರು ಶಾಸಕರನ್ನು ಹಿಂದಕ್ಕೆ ಎಳೆದೊಯ್ದು ಹೋರಿ ತಿವಿತದಿಂದ ರಕ್ಷಿಸಿದ್ದಾರೆ. 

ದೀಪಾವಳಿ ಹಬ್ಬದ ಪ್ರಯುಕ್ತ ದಾವಣಗೆರೆ ಜಿಲ್ಲೆಯ ದೊಡ್ಡೇರಿಯಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿಯೂ ರೇಣುಕಾಚಾರ್ಯಗೆ ಹೋರಿಯೊಂದು ತಿವಿದಿತ್ತು. ಹೋರಿ ಗುದ್ದಿದ್ದ ರಭಸಕ್ಕೆ ರೇಣುಕಾಚಾರ್ಯ ಕೆಳಗೆ ಬಿದ್ದಿದ್ದರು.

SCROLL FOR NEXT