ದೇಶ

ಮಹಾರಾಷ್ಟ್ರ: ಸಿಕ್ಸರ್ ಗಳಿಂದ ಫಿಕ್ಸರ್ ಗಳಿಗೆ ಸೋಲು - ನಖ್ವಿ ಬಣ್ಣನೆ

Vishwanath S

ನವದೆಹಲಿ: ದೇವೇಂದ್ರ ಫಡ್ನವಿಸ್ ನಾಯಕತ್ವದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯು ಜನಾದೇಶವನ್ನು ಗೌರವಿಸಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಕೆಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

'ಮಹಾರಾಷ್ಟ್ರದಲ್ಲಿನ ಜನರ ಜನಾದೇಶದ ಸಿಕ್ಸರ್ ಗಳು ಫಿಕ್ಸರ್ ಗಳನ್ನು ಸೋಲಿಸಿದ್ದಾರೆ ಎಂದು ನಖ್ವಿ ಸುದ್ದಿಗಾರರಿಗೆ ಶನಿವಾರ ಇಲ್ಲಿ ತಿಳಿಸಿದ್ದಾರೆ. 

'ಪಿಚ್ ಜಾರುವಂತಿದ್ದರೆ ರನ್‍ಔಟ್ ಆಗುವ ಅಪಾಯವಿರುತ್ತದೆ. ಕಾಂಗ್ರೆಸ್ ಮತ್ತು ಅದರ ಅಧಿಕಾರ ದಾಹದ ಪಕ್ಷಗಳ ಪರಿಸ್ಥಿತಿ ಇದೇ ಆಗಿತ್ತು ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ರಾತ್ರೋರಾತ್ರಿ ಬಿಜೆಪಿ ಎನ್ಸಿಪಿಯ ಅಜಿತ್ ಪವಾರ್ ಜೊತೆ ಸೇರಿ ಸರ್ಕಾರ ರಚಿಸುವ ಮೂಲಕ ಮರ್ಮಾಘಾತ ನೀಡಿತ್ತು.

SCROLL FOR NEXT