ದೇಶ

ರಾಜ್ಯದ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ: ಶಿವಸೇನೆ 

Sumana Upadhyaya

ಮುಂಬೈ; ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರ್ಕಾರ ಮೇಲೆ ಶಿವಸೇನೆ ತನ್ನ ಟೀಕೆಯನ್ನು ಮುಂದುವರಿಸಿದ್ದು ಮಹಾರಾಷ್ಟ್ರ ಸರ್ಕಾರ ಆಡಳಿತಯಂತ್ರವನ್ನು ಶಿವಸೇನೆ ಪಿತೂರಿ ಮತ್ತು ವಂಚನೆಗಳಿಗೆ ಬಳಸಿಕೊಳ್ಳುವುದಿಲ್ಲ ಎಂದಿದೆ.


ಈ ಕುರಿತು ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ ಶಿವಸೇನೆ, ಅಧಿಕೃತ ಬಂಗಲೆಗಳು, ಸರ್ಕಾರಿ ಅಧಿಕಾರಿಗಳು, ತನಿಖಾ ಸಂಸ್ಥೆಗಳನ್ನು ಸರ್ಕಾರ ವಂಚನೆ ಮತ್ತು ಪಿತೂರಿ ನಡೆಸಲು ಉಪಯೋಗಿಸುವುದಿಲ್ಲ. ಪಾರದರ್ಶಕವಾಗಿ ಸ್ವಚ್ಛ ಮಾದರಿಯಲ್ಲಿ ಸರ್ಕಾರ ಆಡಳಿತ ನಡೆಸಲಿದೆ ಎಂದು ಕೇಂದ್ರ ಸರ್ಕಾರಕ್ಕೆ ತಿವಿದಿದೆ,


ಉದ್ಧವ್ ಠಾಕ್ರೆಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ರಾಜ್ಯದಲ್ಲಿ ಇಂದು ಹೊಸ ಸೂರ್ಯೋದಯವಾಗಿದೆ, ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಇದ್ದಂತೆ ಜನರಲ್ಲಿ ಇಂದು ತುಂಬಾ ಉತ್ಸಾಹ ಕಂಡುಬರುತ್ತಿದೆ, ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ, ಉದ್ಧವ್ ಠಾಕ್ರೆಯವರನ್ನು ಆ ಹುದ್ದೆಯಲ್ಲಿ ಕಾಣುವುದು ಮಹಾರಾಷ್ಟ್ರ ರಾಜ್ಯದ ಅದೃಷ್ಟ ಎನ್ನಬಹುದು ಎಂದು ಸಂಪಾದಕೀಯದಲ್ಲಿ ಬರೆದುಕೊಂಡಿದೆ.

SCROLL FOR NEXT