ದೆಹಲಿ-ಕತ್ರಾ 'ವಂದೇ ಭಾರತ್ ಎಕ್ಸ್'ಪ್ರೆಸ್'ಗೆ ಅಮಿತ್ ಶಾ ಚಾಲನೆ 
ದೇಶ

ದೆಹಲಿ-ಕತ್ರಾ 'ವಂದೇ ಭಾರತ್ ಎಕ್ಸ್'ಪ್ರೆಸ್'ಗೆ ಅಮಿತ್ ಶಾ ಚಾಲನೆ

ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರರ ಕತ್ರಾದಲ್ಲಿ ನೆಲೆಯೂರಿರುವ ವೈಷ್ಣೋದೇವಿ ದೇವಿ ದೇವಾಲಯದವರೆಗೂ ತೆರಳುವ 'ವಂದೇ ಭಾರತ್ ಎಕ್ಸ್'ಪ್ರೆಸ್'ಗೆ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಿದ್ದಾರೆ. 

ನವದೆಹಲಿ: ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರರ ಕತ್ರಾದಲ್ಲಿ ನೆಲೆಯೂರಿರುವ ವೈಷ್ಣೋದೇವಿ ದೇವಿ ದೇವಾಲಯದವರೆಗೂ ತೆರಳುವ 'ವಂದೇ ಭಾರತ್ ಎಕ್ಸ್'ಪ್ರೆಸ್'ಗೆ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಿದ್ದಾರೆ. 

ಕೇವಲ 8 ಗಂಟೆಗಳಲ್ಲಿ 655 ಕಿ.ಮೀ ತಲುಪುವ ವಂದೇ ಭಾರತ್ ಎಕ್ಸ್'ಪ್ರೆಸ್'ಗೆ ಅಮಿತ್ ಶಾ ಅವರು ರಾಜಧಾನಿ ದೆಹಲಿಯಲ್ಲಿ ಹಸಿರು ನಿಶಾನೆ ತೋರಿದ್ದಾರೆ. 

ಬಳಿಕ ಮಾತನಾಡಿರುವ ಅಮಿತ್ ಶಾ ಅವರು, ನವರಾತ್ರಿ ವಿಶೇಷ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಜನತೆಗೆ ಇಂತಹ ದೊಡ್ಡ ಉಡುಗೊರೆ ನೀಡಿರುವ ಭಾರತೀಯ ರೈಲ್ವೇಗೆ ನನ್ನ ಹೃದಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಭಾರತದಲ್ಲಿ ರೈಲನ್ನು ನಿರ್ಮಾಣ ಮಾಡಿದ್ದಕ್ಕೆ ಹೆಮ್ಮೆಯಿದೆ. ತತ್ವಗಳು, ವೇಗ ಹಾಗೂ ಸೇವೆಗಳನ್ನೇ ಗುರಿಯಾಗಿರಿಸಿಕೊಂಡು ರೈಲ್ವೇ ಇಲಾಖೆ ಸಾಧನೆ ಮಾಡಿದೆ. ಸ್ಥಳೀಯ ಪ್ರವಾಸಕ್ಕೆ ಈ ಯೋಜನೆ ಸಹಾಯಕವಾಗಲಿದೆ. ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಸ್ಥಳೀಯ ಪ್ರವಾಸ ಅತ್ಯಂತ ದೊಡ್ಡ ಪಾತ್ರವಹಿಸಲಿದೆ. ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವುದಿಲ್ಲ ಎಂಬ ಯಾವುದೇ ಗ್ರಾಮ ಭಾರತದಲ್ಲಿಲ್ಲ ಎಂದು ತಿಳಿಸಿದ್ದಾರೆ. 

ಆಗಸ್ಟ್ 15ರಂದು ಲೋಕಾರ್ಪಣೆಗೊಂಡಿದ್ದ ಈ ರೈಲು ಭಾರೀ ಜನಮನ್ನಣೆ ಗಳಿಸಿತ್ತು. ವಂದೇ ಭಾರತ್ ಎಕ್ಸ್'ಪ್ರೆಸ್ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದ್ದು, 1128 ಆಸನಗಳನ್ನು ಹೊಂದಿದೆ. ಇದರಲ್ಲಿ 14 ಬೋಗಿಗಳು ಜನರಲ್ ಚೇರ್ ಗಳಾಗಿವೆ. ಅದರಲ್ಲಿ 936 ಆಸನಗಳಿವೆ. 

ದೆಹಲಿಯಿಂದ ಲುಧಿಯಾನದ ನಡುವೆ 130 ಕಿಮೀ ವೇಗದಲ್ಲಿ ಚಲಿಸಲು ಅನುಮತಿ ನೀಡಲಾಗಿದ್ದು. ಲುಧಿಯಾನದಿಂದ ಕತ್ರಾವರೆಗೂ ಗಂಟೆಗೆ 75 ಕಿಮೀ ವೇಗದಲ್ಲಿ ಈ ರೈಲು ಚಲಿಸಲಿದೆ. 

ಇಂಜಿನ್ ರಹಿತವಾಗ ಈ ರೈಲು ಒಟ್ಟಾರೆ 16 ಕಿಮೀ ವೇಗದಲ್ಲಿ ಸಂಚರಿಸಲಿದೆ. ಶತಾಬ್ದಿ ಎಕ್ಸ್'ಪ್ರೆಸ್ ಗಿಂತಲೂ ವಂದೇ ಭಾರತ್ ರೈಲು ಸಂಚರಿಸಲಿದೆ. ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಪ್ರತೀ ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳು, ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ, ಮನರಂಜನೆಗೆ ಅಗತ್ಯವಿರುವ ವ್ಯವಸ್ಥೆಗಳು, ಮೊಬೈಲ್ ಚಾರ್ಜಿಂಗ್ ಆಯ್ಕೆಗಳೂ ಕೂಡ ಇಲ್ಲಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT