ದೇಶ

ವರದಕ್ಷಿಣಿ ಕಿರುಕುಳ: ಮಹಿಳೆ ಸಜೀವ ದಹನ

Nagaraja AB

ಮುಜಾಫರ್ ನಗರ:  ವರದಕ್ಷಿಣಿ ಕಿರುಕುಳದಿಂದ ಮಹಿಳೆಯೊಬ್ಬರನ್ನು ಸಜೀವವಾಗಿ ದಹಿಸಲಾಗಿದೆ. ಉತ್ತರ ಪ್ರದೇಶದ ಮುಜಾಫರ್ ನಗರದ ಸೈಧಮ್ ಕಾಲೋನಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸುಗುಣಾ ಮೃತ ದುರ್ದೈವಿ. ಆಕೆಯನ್ನು  ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಎಸ್ ಹೆಚ್ ಓ ಸಮೇಪಾಲ್ ಅತ್ರಿ ಹೇಳಿದ್ದಾರೆ. 

ಈ ಪ್ರಕರಣ ಸಂಬಂಧ ಆಕೆಯ ಪತಿ ಅರುಣ್ ಕುಮಾರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರೆಲ್ಲರೂ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅರುಣ್ ಕುಮಾರ್ ಅವರೊಂದಿಗೆ ಒಂದೂವರೆ ವರ್ಷದ ಹಿಂದೆ ಸುಗುಣಾ ವಿವಾಹವಾಗಿದ್ದರು. ಆಗಿನಿಂದಲೂ ವರದಕ್ಷಿಣಿ ಕಿರುಕುಳ ನೀಡಲಾಗುತಿತ್ತು. ನಿನ್ನೆ ರಾತ್ರಿ ಅರುಣ್ ಕುಮಾರ್ ಹಾಗೂ ಆತನ ತಂದೆ ತಾಯಿ ಸೇರಿ ಸಜೀವವಾಗಿ ಸುಗುಣಾಳನ್ನು ಸುಟ್ಟು ಹಾಕಿದ್ದಾರೆ ಎಂದು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. 

SCROLL FOR NEXT