ಸಾಂದರ್ಭಿಕ ಚಿತ್ರ 
ದೇಶ

ಅಕ್ರಮವಾಗಿ ಧರ್ಮ ಬೋಧನೆ; 14 ವಿದೇಶಿಯರನ್ನು ಬಿಜ್ನೊರ್ ಜಿಲ್ಲೆ ತೊರೆಯಲು ಸೂಚನೆ

ಧಾರ್ಮಿಕತೆಯನ್ನು ಅಕ್ರಮವಾಗಿ ಭೋದಿಸುತ್ತಿದ್ದ ಕಾರಣಕ್ಕೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯನ್ನು ತೊರೆಯುವಂತೆ 13 ಥೈಲ್ಯಾಂಡ್ ಮತ್ತು ಒಬ್ಬ ಮಲೇಷಿಯಾ ಪ್ರಜೆಗಳಿಗೆ ಸೂಚಿಸಲಾಗಿದೆ.

ಬಿಜ್ನೊರ್: ಧಾರ್ಮಿಕತೆಯನ್ನು ಅಕ್ರಮವಾಗಿ ಭೋದಿಸುತ್ತಿದ್ದ ಕಾರಣಕ್ಕೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯನ್ನು ತೊರೆಯುವಂತೆ 13 ಥೈಲ್ಯಾಂಡ್ ಮತ್ತು ಒಬ್ಬ ಮಲೇಷಿಯಾ ಪ್ರಜೆಗಳಿಗೆ ಸೂಚಿಸಲಾಗಿದೆ.


ಪ್ರವಾಸಿ ವೀಸಾದಲ್ಲಿರುವ ಈ ಪ್ರವಾಸಿಗರು ಬಿಜ್ನೊರ್ ನ ಮಸೀದಿಯಲ್ಲಿ ಭೋದಿಸುತ್ತಿದ್ದ ಧಾರ್ಮಿಕತೆ ಬಗ್ಗೆ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ. 


ಸ್ಥಳೀಯ ಗುಪ್ತಚರ ಘಟಕದಿಂದ ಪ್ರಕರಣ ಗಮನಕ್ಕೆ ಬಂದಿದ್ದು ನಿನ್ನೆ ಈ ಪ್ರಜೆಗಳಿಗೆ ಮಸೀದಿ ಬಿಟ್ಟು ತೊರೆದುಹೋಗುವಂತೆ ಸೂಚಿಸಲಾಗಿದೆ. ದೇಶದ ಬೇರೆ ಯಾವುದೇ ಭಾಗದಲ್ಲಿ ಇವರು ಧಾರ್ಮಕತೆಯನ್ನು ಭೋದಿಸುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಈ ವಿಚಾರವನ್ನು ಕೇಂದ್ರ ಗುಪ್ತಚರ ಇಲಾಖೆಗೆ ಕಳುಹಿಸಲಾಗಿದೆ. ಪ್ರವಾಸಿ ವೀಸಾ ಪ್ರಕಾರ, ಪ್ರವಾಸದಲ್ಲಿರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭೋದನೆಗಳಲ್ಲಿ ಭಾಗಿಯಾಗಬಾರದು. ಈ ಬಗ್ಗೆ 14 ವಿದೇಶಿ ಪ್ರಜೆಗಳು ಮತ್ತು ಮಸೀದಿ ಅಧಿಕಾರಿಗಳಲ್ಲಿ ವಿವರಣೆ ಕೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಿ ಗ್ರೇಡ್ ಸಿನಿಮಾಗಿಂತ ಕಳಪೆ': ಪಾಕ್ ಸಂಪರ್ಕ ಆರೋಪಕ್ಕೆ ಗೊಗೋಯ್ ತಿರುಗೇಟು!

ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ, ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್!

ಮೆಟ್ರೋ ದರ ಏರಿಕೆ: 'Mr.CM, Cut the Drama': ತೇಜಸ್ವಿ ಸೂರ್ಯ ಗೆ ಪೊಲೀಸ್ ನೋಟಿಸ್!

ಟಿ20 ವಿಶ್ವಕಪ್ 2026: ಐರ್ಲೆಂಡ್ ವಿರುದ್ಧ ಶ್ರೀಲಂಕಾಗೆ 20 ರನ್ ಜಯ

ವೀರ್ ಸಾವರ್ಕರ್‌ಗೆ 'ಭಾರತ ರತ್ನ' ನೀಡಿದರೆ, ಪ್ರಶಸ್ತಿಯ ಘನತೆ ಮತ್ತಷ್ಟು ಹೆಚ್ಚುತ್ತದೆ: ಮೋಹನ್ ಭಾಗವತ್

SCROLL FOR NEXT