ಸಾಂದರ್ಭಿಕ ಚಿತ್ರ 
ದೇಶ

ಅಕ್ರಮವಾಗಿ ಧರ್ಮ ಬೋಧನೆ; 14 ವಿದೇಶಿಯರನ್ನು ಬಿಜ್ನೊರ್ ಜಿಲ್ಲೆ ತೊರೆಯಲು ಸೂಚನೆ

ಧಾರ್ಮಿಕತೆಯನ್ನು ಅಕ್ರಮವಾಗಿ ಭೋದಿಸುತ್ತಿದ್ದ ಕಾರಣಕ್ಕೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯನ್ನು ತೊರೆಯುವಂತೆ 13 ಥೈಲ್ಯಾಂಡ್ ಮತ್ತು ಒಬ್ಬ ಮಲೇಷಿಯಾ ಪ್ರಜೆಗಳಿಗೆ ಸೂಚಿಸಲಾಗಿದೆ.

ಬಿಜ್ನೊರ್: ಧಾರ್ಮಿಕತೆಯನ್ನು ಅಕ್ರಮವಾಗಿ ಭೋದಿಸುತ್ತಿದ್ದ ಕಾರಣಕ್ಕೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯನ್ನು ತೊರೆಯುವಂತೆ 13 ಥೈಲ್ಯಾಂಡ್ ಮತ್ತು ಒಬ್ಬ ಮಲೇಷಿಯಾ ಪ್ರಜೆಗಳಿಗೆ ಸೂಚಿಸಲಾಗಿದೆ.


ಪ್ರವಾಸಿ ವೀಸಾದಲ್ಲಿರುವ ಈ ಪ್ರವಾಸಿಗರು ಬಿಜ್ನೊರ್ ನ ಮಸೀದಿಯಲ್ಲಿ ಭೋದಿಸುತ್ತಿದ್ದ ಧಾರ್ಮಿಕತೆ ಬಗ್ಗೆ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ. 


ಸ್ಥಳೀಯ ಗುಪ್ತಚರ ಘಟಕದಿಂದ ಪ್ರಕರಣ ಗಮನಕ್ಕೆ ಬಂದಿದ್ದು ನಿನ್ನೆ ಈ ಪ್ರಜೆಗಳಿಗೆ ಮಸೀದಿ ಬಿಟ್ಟು ತೊರೆದುಹೋಗುವಂತೆ ಸೂಚಿಸಲಾಗಿದೆ. ದೇಶದ ಬೇರೆ ಯಾವುದೇ ಭಾಗದಲ್ಲಿ ಇವರು ಧಾರ್ಮಕತೆಯನ್ನು ಭೋದಿಸುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಈ ವಿಚಾರವನ್ನು ಕೇಂದ್ರ ಗುಪ್ತಚರ ಇಲಾಖೆಗೆ ಕಳುಹಿಸಲಾಗಿದೆ. ಪ್ರವಾಸಿ ವೀಸಾ ಪ್ರಕಾರ, ಪ್ರವಾಸದಲ್ಲಿರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭೋದನೆಗಳಲ್ಲಿ ಭಾಗಿಯಾಗಬಾರದು. ಈ ಬಗ್ಗೆ 14 ವಿದೇಶಿ ಪ್ರಜೆಗಳು ಮತ್ತು ಮಸೀದಿ ಅಧಿಕಾರಿಗಳಲ್ಲಿ ವಿವರಣೆ ಕೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ