ಕಪಿಲ್ ಮಿಶ್ರಾ 
ದೇಶ

ಮಸ್ಲಿಮ್ ಮಕ್ಕಳನ್ನು 'ಮಾಲಿನ್ಯ'ಕ್ಕೆ ಹೋಲಿಸಿದ ಮಾಜಿ ಎಎಪಿ ಶಾಸಕ!

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಎಎಪಿ ಶಾಸಕ ಕಪಿಲ್ ಮಿಶ್ರಾ ಮಾಡಿದ್ದ ಟ್ವೀಟ್ ಒಂದು ವಿವಾದದ ಬಿರುಗಳಿ ಎಬ್ಬಿಸಿದೆ. ಮಿಶ್ರಾ ಅವರ ಟ್ವೀಟ್ ಒಂದು ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದೆ ಎಂದು ರಾಹ್ಟ್ರೀಯ ಜನತಾ ದಳ (ಆರ್ಜೆಡಿ) ಆರೋಪ ಮಾಡಿದೆ.

ನವದೆಹಲಿ: ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಎಎಪಿ ಶಾಸಕ ಕಪಿಲ್ ಮಿಶ್ರಾ ಮಾಡಿದ್ದ ಟ್ವೀಟ್ ಒಂದು ವಿವಾದದ ಬಿರುಗಳಿ ಎಬ್ಬಿಸಿದೆ. ಮಿಶ್ರಾ ಅವರ ಟ್ವೀಟ್ ಒಂದು ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದೆ ಎಂದು ರಾಹ್ಟ್ರೀಯ ಜನತಾ ದಳ (ಆರ್ಜೆಡಿ) ಆರೋಪ ಮಾಡಿದೆ.

ಕಪಿಲ್ ಮಿಶ್ರಾ ಮಾತ್ರ ತಾವು ಜನಸಂಖ್ಯೆ ನಿಯಂತ್ರಣದ ಕುರಿತ ಜಾಗೃತಿಗಾಗಿ ಈ ಟ್ವೀಟ್ ಮಾಡಿದ್ದಾಗಿ ಸಮರ್ಥಿಸಿಕೊಂಡರು. 

"ಮಾಲಿನ್ಯವು ಕಡಿಮೆಯಾಗಬೇಕೆಂದು ನೀವು ಬಯಸಿದರೆ, ನೀವು ಈ ಪಟಾಕಿಗಳನ್ನು ಕಡಿಮೆ ಮಾಡಬೇಕು ಮತ್ತು ದೀಪಾವಳಿಯಂದು ಸಿಡಿವ ಪಟಾಕಿಗಳನ್ನಲ್ಲ" ಎಂದು ಮಿಶ್ರಾ ಟ್ವೀಟ್ ಮಾಡಿದ್ದು ಜತೆಗೆ ಮುಸ್ಲಿಂ ಟೋಪಿ ಧರಿಸಿದ ವೃದ್ದ, ಹಲವಾರು ಮಕ್ಕಳೊಡನೆ ಸಾಲಲ್ಲಿ ನಿಂದ ಬುರ್ಖಾಧಾರಿ ಮುಸ್ಲಿಂ ಮಹಿಳೆಯ ಚಿತ್ರವನ್ನು ಅವರು ಟ್ಯಾಗ್ ಮಾಡಿದ್ದಾರೆ.

ಆರ್ಜೆಡಿ ಮಿಶ್ರಾ ಅವರ ಈ ಟ್ವೀಟ್ ಬಗೆಗೆ ಖಾರವಾಗಿ ಪ್ರತಿಕ್ರಯಿಸಿದ್ದು ಮಿಶ್ರಾ "ಮುಸ್ಲಿಂ ಮಕ್ಕಳನ್ನು" ಮಾಲಿನ್ಯಕ್ಕೆ ಹೋಲಿಸಿದ್ದಾರೆ, ಇದು ಅವರ "ಕೀಳು ರಾಜಕಾರಣ"ವನ್ನು ತೋರುತ್ತದೆ ಎಂದಿದೆ.

ಆದರೆ ಮಾಜಿ ಎಎಪಿ ಶಾಸಕ ಮಿಶ್ರಾ ತಾವು ಮಕ್ಕಳ ಚಿತ್ರವನ್ನಷ್ಟೇ ಪೋಸ್ಟ್ ಮಾಡಿದ್ದು ವಿರೋಧಿಗಳು ಅದನ್ನು ಮುಸ್ಲಿಮರ ಮಕ್ಕಳಂತೆ ನೋಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.ಅಲ್ಲದೆ ನನ್ನ ಟ್ವೀಟ್ ನಲ್ಲಿ ಹಿಂದೂ, ಮುಸ್ಲಿಂ ಎಂಬ ಯಾವ ಉಲ್ಲೇಖವಿಲ್ಲ ಎಂದೂ ಹೇಳಿದ್ದಾರೆ.

"ಚಿತ್ರವು ಹಿಂದೂ ಕುಟುಂಬದ್ದಾಗಿದ್ದರೆ ಅವರು ಹೀಗೆನ್ನುತ್ತಿರಲಿಲ್ಲ" ಎಂದೂ ಮಿಶ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಿಶ್ರಾ ವಿರುದ್ಧ ವಾಗ್ದಾಳಿ ನಡೆಸಿದ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು "ಒಂದು ಚುನಾವಣಾ ಟಿಕೆಟ್ ಗಾಗಿ ಈ ಮಟ್ಟಕ್ಕೆ ಇಳಿಯಬಾರದು, ಮುಂದೆ ಎದ್ದೇಳಲು ಕಷ್ಟವಾಗಲಿದೆ" ಎ<ದರು.

ಆದರೆ ಮಿಶ್ರಾ "ತಾವು ಜನಸಂಖ್ಯಾ ನಿಯಂತ್ರಣದ ಬಗೆಗೆ ಮಾಡಿದ ಒಂದು ಟ್ವೀಟ್ ನಿಂದ ಇಂತಹಾ ಬೆದರಿಕೆಗಳು ಬರುತ್ತಿದೆ, ಒಂದೊಮ್ಮೆ ನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ಬಂದಾಗ ಈ ಜನರು ಏನು ಮಾಡುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ಟ್ವಿಟ್ಟರ್ ಸಂಸ್ಥೆ ತನ್ನ ನಿಯಮಾವಳಿಗೆ ವಿರುದ್ಧವಾಗಿದ್ದ ಮಿಶ್ರಾ ಅವರ ಟ್ವೀಟ್ ಅನ್ನು ಅಳಿಸಿಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಇದೆಲ್ಲಾ ನನ್ ಮೇಲೆ ಪರಿಣಾಮ ಬೀರೊಲ್ಲ': ನ್ಯಾಯಾಲಯದಲ್ಲಿ CJI ಮೇಲೆ ಶೂ ಎಸೆದ ವಕೀಲ; Gavai ಪ್ರತಿಕ್ರಿಯೆ

Frances New PM Resigns: ಕ್ಯಾಬಿನೆಟ್ ರಚನೆ ಬೆನ್ನಲ್ಲೆ ಫ್ರಾನ್ಸ್‌ನ ನೂತನ ಪ್ರಧಾನಿ ರಾಜೀನಾಮೆ! ಕಾರಣವೇನು?

ಗಾಜಾದ ಅಂತಿಮ ಭರವಸೆ: ಈಜಿಪ್ಟ್‌ನಲ್ಲಿ ನಡೆಯುವ ಮಾತುಕತೆಗಳು ಯುದ್ಧ ನಿಲ್ಲಿಸಬಹುದೇ? (ಜಾಗತಿಕ ಜಗಲಿ)

ಸಮಾಜದಲ್ಲಿ ಜ್ಞಾನದ ಬೆಳಕನ್ನು ಬೆಳಗಿಸುವವರು ಬ್ರಾಹ್ಮಣರು: ದೆಹಲಿ ಸಿಎಂ ರೇಖಾ ಗುಪ್ತಾ

ರಾಜ್ಯದಲ್ಲಿ coldrif ಸಿರಪ್ ಸರಬರಾಜು ಆಗಿಲ್ಲ: ಕೆಲವು ಕೆಮ್ಮಿನ ಔಷಧಿಗಳ ಮೇಲೆ ನಿಗಾ ಇಡಲು ಸೂಚನೆ; ದಿನೇಶ್ ಗುಂಡೂರಾವ್

SCROLL FOR NEXT