ಸಂಚಾರಿ ನಿಯಮ ಉಲ್ಲಂಘನೆ: ಆಟೋ ಚಾಲಕನಿಗೆ 47,500 ರೂ ದಂಡ! 
ದೇಶ

ಸಂಚಾರಿ ನಿಯಮ ಉಲ್ಲಂಘನೆ: ಆಟೋ ಚಾಲಕನಿಗೆ 47,500 ರೂ ದಂಡ! 

ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಆಟೋ ಚಾಲಕನಿಗೆ ಮೋಟಾರು ವಾಹನಗಳ ಕಾಯ್ದೆ (ತಿದ್ದುಪಡಿ) ಅನ್ವಯ  47,500 ರೂಪಾಯಿ ದಂಡ ವಿಧಿಸಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. 

ಭುವನೇಶ್ವರ್: ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಆಟೋ ಚಾಲಕನಿಗೆ ಮೋಟಾರು ವಾಹನಗಳ ಕಾಯ್ದೆ (ತಿದ್ದುಪಡಿ) ಅನ್ವಯ  47,500 ರೂಪಾಯಿ ದಂಡ ವಿಧಿಸಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. 

ಗುರುಗ್ರಾಮದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಆಟೋ ಚಾಲಕನಿಗೆ 32,500 ರೂಪಾಯಿ ದಂಡ ವಿಧಿಸಿದ್ದ ಪ್ರಕರಣದ ಬೆನ್ನಲ್ಲೇ ಭುವನೇಶ್ವರದಲ್ಲಿ ಈ ಘಟನೆ ನಡೆದಿದೆ. 

ಸೆ.1 ರಿಂದ ಹೊಸದಾಗಿ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆಯ ಪ್ರಕಾರ ವಿಧಿಸಲಾಗಿರುವ ಅತಿ ಗರಿಷ್ಠ ಮೊತ್ತದ ಮೊದಲ ದಂಡ ಇದಾಗಿದೆ. 

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಭುವನೇಶ್ವರದ ಆಟೋ ಚಾಲಕ ಹದಿಬಂಧು ಕನ್ಹರ್ ನ್ನು ಆರ್ ಟಿಒ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇದೇ ವೇಳೆ ಆತನ ಮತ್ತಷ್ಟು ಅಪರಾಧಗಳು ಬೆಳಕಿಗೆ ಬಂದಿದೆ. 

ಮದ್ಯ ಸೇವನೆ ಮಾಡಿ ಚಾಲನೆ ಮಾಡಿದ್ದಕ್ಕಾಗಿ 10,000 ರೂಪಾಯಿ, ಪರಿಸರ ಮಾಲಿನ್ಯ ನಿಯಮ ಉಲ್ಲಂಘನೆಗೆ 10,000 ರೂಪಾಯಿ,  ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡಿ ಷರತ್ತುಗಳನ್ನು ಉಲ್ಲಂಘಿಸುವುದಕ್ಕೆ 5,000 ರೂಪಾಯಿ, ಫಿಟ್ನೆಸ್ ಪ್ರಮಾಣಪತ್ರ ಚಾಲನಾ ಪರವಾನಗಿ ಇಲ್ಲದೇ ಚಾಲನೆ ಮಾಡಿರುವುದಕ್ಕೆ 5,000 ರೂಪಾಯಿ, ಅನಧಿಕೃತ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ್ದಕ್ಕೆ 2,000 ರೂಪಾಯಿ ದಂಡ ವಿಧಿಸಲಾಗಿದೆ. 

ನಾನು ಯಾವುದೇ ಅಪರಾಧ ಮಾಡಿಲ್ಲ, ಕಳ್ಳತನವಾಗುವ ಭಯದಿಂದ ವಾಹನದಲ್ಲಿ ದಾಖಲೆಗಳನ್ನು ಇಟ್ಟಿರಲಿಲ್ಲ. ಮನೆಯಲ್ಲಿ ಎಲ್ಲಾ ದಾಖಲೆಗಳನ್ನೂ ಇಟ್ಟಿದ್ದೇನೆ ಬಿಟ್ಟರೆ ತಂದುಕೊಡುತ್ತೇನೆ ಎಂದಿರುವ ಚಾಲಕ ಚಾಲನೆ ವೇಳೆ ಮದ್ಯಪಾನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಮೆರಿಕ ಅಡಿಯಲ್ಲೇ ವೆನೆಜುವೆಲಾ ಇರಲಿದೆ... ಯಾರ ಸುಪರ್ದಿಗೂ ನೀಡಲ್ಲ': Nicolas Maduro ಬಂಧನ ಬಳಿಕ ಡೊನಾಲ್ಡ್ ಟ್ರಂಪ್ ಮಾತು!

ಆಗ Navy Seal.. ಈಗ ಡೆಲ್ಟಾ ಫೋರ್ಸ್: Venezuela ಅಧ್ಯಕ್ಷರ ಹೆಡೆಮುರಿ ಕಟ್ಟಿದ ಅಮೆರಿಕದ ಸೀಕ್ರೆಟ್ ಸೇನೆ! Video

Ranjitha Murder: ಆರೋಪಿ ರಫೀಕ್ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ! ಮುತಾಲಿಕ್ ಆಕ್ರೋಶ, ಯಲ್ಲಾಪುರ ಬಂದ್ ಕರೆ!

ಬಳ್ಳಾರಿ ಫೈರಿಂಗ್, ಘರ್ಷಣೆ: 'ಸಾವನ್ನಪ್ಪಿದ ವ್ಯಕ್ತಿಗೆ ತಗುಲಿದ ಗುಂಡು ಪೊಲೀಸರ ಬಂದೂಕಿನದ್ದಲ್ಲ..' ಎಸ್‌ಪಿ ವರ್ಗಾವಣೆಗೆ ಕಾರಣ ಕೊಟ್ಟ G Parameshwara

ತಲೆ ಮೇಲೆ ಹೈ ಟೆನ್ಷನ್ ವೈರ್: ಕೂದಲೆಳೆ ಅಂತರದಲ್ಲಿ ಆಂಧ್ರ ಡಿಸಿಎಂ ಪಾರು, ಪುನರ್ಜನ್ಮ ಎಂದ Pawan Kalyan, Video Viral

SCROLL FOR NEXT