ಕಟ್ಟಡದ ಅಡಿಪಾಯದಲ್ಲಿ ಬಂಗಾರ, ಆಭರಣ ಪತ್ತೆ 
ದೇಶ

ಕಟ್ಟಡದ ಅಡಿಪಾಯದಲ್ಲಿ ಬಂಗಾರ, ಆಭರಣ ಪತ್ತೆ

ಕಟ್ಟಡದ ಅಡಿಪಾಯವೊಂದರ ಉತ್ಖನನದಲ್ಲಿ ಹಿತ್ತಾಳೆಯ ಗಡಿಗೆಯಲ್ಲಿ  25 ಲಕ್ಷ ರೂ.ಗೂ ಹೆಚ್ಚಿನ ಬೆಲೆಬಾಳುವ ಬಂಗಾರ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.

ಹರದೋಯಿ: ಕಟ್ಟಡದ ಅಡಿಪಾಯವೊಂದರ ಉತ್ಖನನದಲ್ಲಿ ಹಿತ್ತಾಳೆಯ ಗಡಿಗೆಯಲ್ಲಿ  25 ಲಕ್ಷ ರೂ.ಗೂ ಹೆಚ್ಚಿನ ಬೆಲೆಬಾಳುವ ಬಂಗಾರ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ.
  
ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಸಾಂಡಿ ಪಟ್ಟಣದಲ್ಲಿ ಈ ಆಭರಣಗಳು ಪತ್ತೆಯಾಗಿವೆ.
  
ಗುರುವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ,  ಕೊಟ್ಟಾಲಿಯ ಸಾಂಡಿ ಪಟ್ಟಣದ ಕಿಡಕಿಯಾಂ ಮೊಹಲ್ಲಾದಲ್ಲಿ ಕಟ್ಟಡವೊಂದರ ತಳಪಾಯವನ್ನು  ಅಗೆಯುವ ಕೆಲಸ ನಡೆಯುತ್ತಿದ್ದಾಗ, ಕಾರ್ಮಿಕರಿಗೆ ನೆಲದಲ್ಲಿ ಹುದುಗಿಟ್ಟು ಹಿತ್ತಾಳೆಯ  ಗಡಿಗೆ ಕಂಡಿದ್ದು, ಅದನ್ನು ತೆಗೆದು ನೋಡಿದಾಗ ಅದರಲ್ಲಿ ಚಿನ್ನ ಮತ್ತು ಬೆಳ್ಳಿಯ  ಆಭರಣಗಳು ತುಂಬಿದ್ದವು.

ಸಿಕ್ಕ ಆಭರಣಗಳನ್ನು  ಕಾರ್ಮಿಕರು ಪರಸ್ಪರ ಹಂಚಿಕೊಳ್ಳಲು ಪ್ರಯತ್ನಿಸಿದಂತಹ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ  ತಿಳಿದು, ಕಾರ್ಮಿಕರ ಬಳಿಯಲಿದ್ದ ಸುಮಾರು 25 ಲಕ್ಷ ರೂ. ಹೆಚ್ಚಿನ ಮೌಲ್ಯದ 600 ಗ್ರಾಂ  ಬಂಗಾರದ ಹಾಗೂ, 4.5 ಗ್ರಾಂನಷ್ಟು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ಅಲೋಕ್ ಪ್ರಿಯದರ್ಶಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT