ದೇಶ

ತೆಲಂಗಾಣ ಸಚಿವ ಸಂಪುಟ ವಿಸ್ತರಣೆ: ಕೆಸಿಆರ್ ಪುತ್ರ, ಸಂಬಂಧಿ ಸೇರಿ 6 ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ

Lingaraj Badiger

ಹೈದರಾಬಾದ್: ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ನೇತೃತ್ವದ ತೆಲಂಗಾಣ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು, ಭಾನುವಾರ 6 ಮಂದಿ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಕೆಸಿಆರ್ ಅವರು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಇಂದು ಎರಡನೇ ಬಾರಿ ತಮ್ಮ ಸಂಪುಟ ವಿಸ್ತರಣೆ ಮಾಡಿದ್ದು, ತಮ್ಮ ಪುತ್ರ ಕೆಟಿ ರಾಮ ರಾವ್ ಹಾಗೂ ಸಂಬಂಧಿ ಟಿ ಹರೀಶ್ ರಾವ್, ಸಬಿತಾ ಇಂದ್ರಾ ರೆಡ್ಡಿ, ಪುವ್ವದ್ ಅಜಯ್ ಕುಮಾರ್, ಗಂಗೂಲ ಕಮಲಾಕರ್ ಮತ್ತು ಸತ್ಯವತಿ ರಾಠೋಡ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಇದರೊಂದಿಗೆ 12 ಸದಸ್ಯ ಬಲವಿದ್ದ ಕೆಸಿಆರ್ ಸಚಿವ ಸಂಪುಟ ಈಗ 18ಕ್ಕೇರಿದಂತಾಗಿದೆ.

ಇಂದು ಬೆಳಗ್ಗೆ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ತೆಲಂಗಾಣ ನೂತನ ರಾಜ್ಯಪಾಲೆ ತಮಿಳಿಸೈ ಸೌಂದರರಾಜ್ ಅವರು ಸಂಜೆ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
 

SCROLL FOR NEXT