ದೇಶ

ಉತ್ತರ ಪ್ರದೇಶ: ಚಿತ್ರಕೂಟದಲ್ಲಿ ರಾಜ್ಯದ ಮೊದಲ ಹಗ್ಗದ ಮಾರ್ಗ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

Srinivas Rao BV

ಚಿತ್ರಕೂಟ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರಕೂಟದಲ್ಲಿ ರಾಜ್ಯದ ಮೊದಲ ಹಗ್ಗದ ಮಾರ್ಗ ('ರೋಪ್'ವೇ)ವನ್ನು ಶನಿವಾರ ಉದ್ಘಾಟಿಸಿ, ಕಾಮನಾಥ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿ ಸ್ವತಃ ರೋಪ್ ವೇಯಲ್ಲಿ ಕಾಮದ್ ಗರಿಯ ಪರಿಕ್ರಮ ಮಾರ್ಗವನ್ನು ಪ್ರಯಾಣಿಸಿದರು. ಅವರು ಇದೇ ವೇಳೆ ಮಹಿಳೆಯರಿಗೆ ಸೆಣಬಿನ ಚೀಲಗಳನ್ನು ವಿತರಿಸಿ, ಪಾಲಿಥಿನ್ ಅನ್ನು ಬಹಿಷ್ಕರಿಸುವಂತೆ ಮನವಿ ಮಾಡಿದರು. ಆದಿತ್ಯನಾಥ್ ಅವರು ಕಾಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಸಲ್ಲಿಸಿದರು. ನಂತರ ಕಾಮದ್;ಗಿರಿಯ ಪರಿಕ್ರಾಮವನ್ನು ಪ್ರಾರಂಭಿಸಿದರು. ಪರಿಕ್ರಾಮದ ಹಾದಿಯಲ್ಲಿರುವ ಎಲ್ಲಾ ದೇವಾಲಯಗಳಲ್ಲೂ ಮುಖ್ಯಮಂತ್ರಿ ಪೂಜೆ ಸಲ್ಲಿಸಿದರು. ಅವರು ಭಾರತ್ ಮಿಲಾಪ್ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

SCROLL FOR NEXT