ಅಮಿತ್ ಶಾ ಹಾಗೂ ರಜನಿಕಾಂತ್ (ಫೈಲ್ ಚಿತ್ರ) 
ದೇಶ

ಹಿಂದಿ ಹೇರಿಕೆ: ಭಾರತದಲ್ಲಿ 'ಸಾಮಾನ್ಯ ಭಾಷೆ'ಯ ಪರಿಕಲ್ಪನೆ ಸಾಧ್ಯವಿಲ್ಲ-ರಜನಿಕಾಂತ್

ಭಾರತದಲ್ಲಿ ಒಂದೇ ಸಾಮಾನ್ಯ ಭಾಷೆ ಬಳಕೆಯ ಪರಿಕಲ್ಪನೆ ಸಾಧ್ಯವಿಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.ಅಲ್ಲದೆ ಹಿಂದಿ ಹೇರಿಕೆಯನ್ನು ಕೇವಲ ದಕ್ಷಿಣದ ರಾಜ್ಯಗಳಷ್ಟೇ ವಿರೋಧಿಸುವುದಿಲ್ಲ ಬದಲಾಗಿ ಉತ್ತರದ ಅನೇಕರು ಸಹ ಅದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಚೆನ್ನೈ: ಭಾರತದಲ್ಲಿ ಒಂದೇ ಸಾಮಾನ್ಯ ಭಾಷೆ ಬಳಕೆಯ ಪರಿಕಲ್ಪನೆ ಸಾಧ್ಯವಿಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.ಅಲ್ಲದೆ ಹಿಂದಿ ಹೇರಿಕೆಯನ್ನು ಕೇವಲ ದಕ್ಷಿಣದ ರಾಜ್ಯಗಳಷ್ಟೇ ವಿರೋಧಿಸುವುದಿಲ್ಲ ಬದಲಾಗಿ ಉತ್ತರದ ಅನೇಕರು ಸಹ ಅದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾಇತ್ತೀಚೆಗೆ ಹಿಂದಿಯನ್ನು ಭಾರತದ ಸಾಮಾನ್ಯ ಭಾಷೆಯನ್ನಾಗಿ ಮಾಡಬೇಕೆಂದು ಹೇಳಿದ್ದರು.

ಸಾಮಾನ್ಯ ಭಾಷೆಯ ಪರಿಕಲ್ಪನೆ ಭಾರತದಲ್ಲಿ "ಸಾಧ್ಯವಿಲ್ಲ"ದ ಕಾರಣ ಹಿಂದಿ ಹೇರಿಕೆ ಮಾಡಬಾರದು ಎಂದು ರಜನಿಕಾಂತ್ ಹೇಳಿದ್ದಾರೆ.

"ಸಾಮಾನ್ಯ ಭಾಷೆ ಭಾರತಕ್ಕೆ ಮಾತ್ರವಲ್ಲ, ಯಾವುದೇ ದೇಶದ  ಏಕತೆ ಮತ್ತು ಪ್ರಗತಿಗೆ ಒಳ್ಳೆಯದು. ದುರದೃಷ್ಟವಶಾತ್,ನಮ್ಮ ದೇಶದಲ್ಲಿ  ಒಂದು ಸಾಮಾನ್ಯ ಭಾಷೆಯನ್ನು ಬಳಕೆಗೆ ತರಲು ಸಾಧ್ಯವಿಲ್ಲ. ಆದ್ದರಿಂದ ನೀವು ಯಾವುದೇ ಭಾಷೆಯನ್ನು ಹೇರಲು ಆಗುವುದಿಲ್ಲ"ಚೆನ್ನೈನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಜನಿಕಾಂತ್ ಹೇಳಿದ್ದಾರೆ.

"ವಿಶೇಷವಾಗಿ, ನೀವು ಹಿಂದಿ ಹೇರಿಕೆ ಮಾಡಿದ್ದರೆ ತಮಿಳುನಾಡು ಮಾತ್ರವಲ್ಲ, ದಕ್ಷಿಣದ ಯಾವುದೇ ರಾಜ್ಯಗಳು ಅದನ್ನು ಸ್ವೀಕರಿಸುವುದಿಲ್ಲ. ಅಷ್ತೇ ಅಲ್ಲದೆ ಉತ್ತರದ ಭಾಗಗಳಲ್ಲಿನ ಅನೇಕ ರಾಜ್ಯಗಳು ಸಹ ಅದಕ್ಕೆ ವಿರುದ್ಧವಾಗಿದೆ" ಎಂದು ಅವರು ಹೇಳಿದರು

ಕಳೆದ ಶನಿವಾರ ಶಾ ಹಿಂದಿ ದಿವಸ್ ಸಮಾವೇಶದಲ್ಲಿ ಮಾತನಾಡಿ ಭಾರತದಲ್ಲಿ ಬಹುಸಂಖ್ಯಾತರು ಹಿಂದಿ ಭಾಷೆ ಮಾತನಾಡುತ್ತಾರೆ. ಹಾಗಾಗಿ ಹಿಂದಿಯನ್ನು ದೇಶದ ಸಾಮಾನ್ಯ ಭಾಷೆಯಾಗಿ ಗುರುತಿಸುವ ಮೂಲಕ  ದೇಶದ ಐಕ್ಯತೆಗೆ ಹೆಗ್ಗುರುತಾಗಿಸಬಹುದು ಎಂದಿದ್ದರು. ಅಲ್ಲದೆ ದೇಶದ ನಾನಾ ಬಾಗಗಳಲ್ಲಿ ಹಿಂದಿ ಜನಪ್ರಿಯಗೊಳಿಸುವ ಸಲುವಾಗಿ ಪ್ರಯತ್ನಗಳನ್ನು ಕೈಗೊಳ್ಲಲಾಗುತ್ತದೆ ಎಂದಿದ್ದರು. 

ಶಾ ಅವರ ಈ ಹೇಳಿಕೆ ವ್ಯಾಪಕವಾಗಿ ಟೀಕೆಗೆ ಗುರಿಯಾಗಿವೆ, ವಿಶೇಷವಾಗಿ ತಮಿಳುನಾಡಿನಲ್ಲಿ, ಬಿಜೆಪಿಯ ಮಿತ್ರಪಕ್ಷವಾದ ಎಐಎಡಿಎಂಕೆ ಸಹ ರಾಜ್ಯದಲ್ಲಿ ಹಿಂದಿ ಹೇರಿದರೆ ಮಾತ್ರ "ಪ್ರತಿಕೂಲ ಪರಿಸ್ಥಿತಿ" ನಿರ್ಮಾಣವಾಗಲಿದೆ ಎಂದಿದೆ.ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ  ಕನ್ನಡ ತಮ್ಮ ರಾಜ್ಯದ ಪ್ರಮುಖ ಭಾಷೆ ಮತ್ತು ಅದರ ಪ್ರಾಮುಖ್ಯತೆ ವಿಚಾರವಾಗಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT