ನೋಯ್ಡಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಜೀವಂತವಾಗಿರುವುದನ್ನು ಗಾಂಧಿ ಕುಟುಂಬ ಬಯಸಿರಲಿಲ್ಲ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಾಬಾ ರಾಮ್ ದೇವ್, ಅಮಿತ್ ಶಾ ಕಾರಾಗೃಹದಲ್ಲಿ ಸಾಯಬೇಕು ಎಂಬುದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆಸೆಯಾಗಿತ್ತು ಎಂದು ಹೇಳಿದ್ದಾರೆ.
ಅಮಿತ್ ಶಾ ಜೈಲಿನಲ್ಲಿ ಸಾಯಬೇಕು ಎಂಬುದು ಗಾಂಧಿ ಕುಟುಂಬದ ಮಹತ್ವಾಕಾಂಕ್ಷೆಯಾಗಿತ್ತು ಎಂದು ತಿಳಿಸಿದ್ದಾರೆ, ಇನ್ನು ಮಾಜಿ ಸಚಿವ ಪಿ.ಚಿದಂಬರಂ ವಿರುದ್ದ ಮಾತನಾಡಿದ ಬಾಬಾ ರಾಮದೇವ್, ದೇಶದ ಕಾನೂನನ್ನು ಮುರಿಯುವುದಕ್ಕೆ ಯಾವುದೇ ಕ್ಷಮೆಯಿಲ್ಲ, ಚಿದಂಬರಂ ದೇಶದ ಪವಿತ್ರ ಕಾನೂನನ್ನು ಮುರಿದಿದ್ದಾರೆ ಹೀಗಾಗಿ, ಅವರು ಕೊನೆಯವರೆಗೂ ಜೈಲಿನಲ್ಲೇ ಇರಬೇಕು ಎಂದು ಹೇಳಿದ್ದಾರೆ.
ನಾನು ಯಾವತ್ತೂ ಕಾನೂನು ಉಲ್ಲಂಘಿಸಿಲ್ಲ, ಉಲ್ಲಂಘಿಸುವುದು ಇಲ್ಲ ಎಂದು ರಾಮ್ ದೇವ ತಿಳಿಸಿದ್ದಾರೆ