ಮಳೆಗೆಕಟ್ಟಡದೊಳಗೆ ಒಳಗೆ ನೀರು ನುಗ್ಗಿ ಕಾರು ಮುಳುಗಿರುವುದು 
ದೇಶ

ಹೈದರಾಬಾದ್‌: ಸತತ ಮಳೆ, ಕಾಲುವೆ ಗೋಡೆ ಕುಸಿದು 200 ಮನೆಗಳಿಗೆ ನುಗ್ಗಿದ ನೀರು 

ಹೈದರಾಬಾದ್: ಭಾರೀ ಮಳೆಗೆ ಇಲ್ಲಿನ ಹುಸೇನ್ ಸಾಗರ ಕೆರೆಗೆ ಸಂಪರ್ಕ ಹೊಂದಿರುವ ಕಾಲುವೆಯ ರಕ್ಷಣಾ ಗೋಡೆ ಕುಸಿದು ಅಕ್ಕಪಕ್ಕದಲ್ಲಿದ್ದ ಸುಮಾರು 200 ಮನೆಗಳಿಗೆ ನೀರು ನುಗ್ಗಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.


ಹೈದರಾಬಾದ್ ನ ಎಂ ಎಸ್ ಮಕ್ತಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ನಿನ್ನೆಯಿಂದ ಹೈದರಾಬಾದಿನ ಗುಡಿಮಲ್ಕರ್, ರೆಡ್ ಹಿಲ್ಸ್, ನಂಪಲ್ಲಿ, ಸಿನಗರ್ ಕಾಲೊನಿ, ಜುಬಿಲಿ ಹಿಲ್ಸ್, ಕಾರವಾನ್ ಮತ್ತು ಆಸಿಫ್ ನಗರ್ ಪ್ರದೇಶಗಳಲ್ಲಿ 10ರಿಂದ 14 ಸೆಂ ಮೀಟರ್ ನಷ್ಟು ಮಳೆ ಸುರಿದಿದೆ.

ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಹಲವು ಕಡೆಗಳಲ್ಲಿ ಮೊಣಕಾಲವರೆಗೆ ನೀರು ಎತ್ತರಕ್ಕೆ ಬಂದಿದೆ. ಹೈದರಾಬಾದ್ ಬೃಹತ್ ಮಹಾನಗರ ಪಾಲಿಕೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತ ತಡೆ ಮತ್ತು ಗಾಳಿ ಮಳೆಗೆ ಧರೆಗುರುಳಿರುವ ಮರಗಳನ್ನು ತೆರವುಗೊಳಿಸುವಂತೆ ಹಿರಿಯ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಡಿ ಎಸ್ ಲೋಕೇಶ್ ಕುಮಾರ್ ಸೂಚಿಸಿದ್ದಾರೆ.


ಹಲವು ಮುಳುಗಡೆ ಪ್ರದೇಶಗಳಿಗೆ ಮೇಯರ್ ಬಿ ರಾಮಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 


ಮುಂದಿನ ಮಾರ್ನಾಲ್ಕು ದಿನಗಳ ಕಾಲ ತೆಲಂಗಾಣದ ಬಹುತೇಕ ಕಡೆ ಹಗುರದಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಆತ್ಮಾಹುತಿ ದಾಳಿ: ಭಾರತೀಯ ಪ್ರಜೆ ಸಾವು

20 ವರ್ಷಗಳಿಂದ ಆತನನ್ನು ಕೊಲ್ಲಲು ಬಯಸಿದ್ದೆ: ಫಾರೂಕ್ ಅಬ್ದುಲ್ಲಾ ಮೇಲೆ ದಾಳಿ ನಡೆಸಿದ ಶೂಟರ್ ಹೇಳಿಕೆ!

ಮೊಟ್ಟೆ ಪ್ರಿಯರಿಗೆ ಗುಡ್‌ ನ್ಯೂಸ್‌; ಬೆಲೆಯಲ್ಲಿ ಭಾರೀ ಇಳಿಕೆ, ಗ್ರಾಹಕರು ಸಂತಸ

ಕುವೈತ್ ನ ವಸತಿ ಕಟ್ಟಡಕ್ಕೆ ಶತ್ರು ರಾಷ್ಟ್ರದಿಂದ ಡ್ರೋನ್ ದಾಳಿ: ಭಾರಿ ಪ್ರಮಾಣದ ಹಾನಿ!

ಜಮ್ಮು: ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ, ಮದುವೆ ಮನೆಯಲ್ಲೇ ಗುಂಡಿನ ದಾಳಿ; ಡಿಸಿಎಂಗೆ ಗಾಯ

SCROLL FOR NEXT