ಸಂಗ್ರಹ ಚಿತ್ರ 
ದೇಶ

ಡಿಆರ್ ಡಿಒ ದಿಂದ ಭೂದಾಳಿ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿ ಯಶಸ್ವೀ ಪರೀಕ್ಷೆ

ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ನ ಭೂದಾಳಿ ಮಾದರಿಯ ಪ್ರಯೋಗ ಯಶಸ್ವಿಯಾಗಿ ನೆರವೇರಿಸಿದೆ.

450 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿ

ನವದೆಹಲಿ: ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ನ ಭೂದಾಳಿ ಮಾದರಿಯ ಪ್ರಯೋಗ ಯಶಸ್ವಿಯಾಗಿ ನೆರವೇರಿಸಿದೆ.

ಒಡಿಶಾದ ಬಾಲಾಸೋರ್ ನಲ್ಲಿ ಬ್ರಹ್ಮೋಸ್ ಭೂದಾಳಿ ಮಾದರಿ ಕ್ಷಿಪಣಿಯನ್ನು ಇಂದು ಪರೀಕ್ಷೆಗೊಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಕ್ಷಿಪಣಿ ಯಶಸ್ವಿಯಾಗಿ ಗುರಿ ಮುಟ್ಟಿದೆ ಎನ್ನಲಾಗಿದೆ. ಕ್ಷಿಪಣಿ ರವಾನೆ, ಸಂಗ್ರಹಣೆ ಮತ್ತು ಉಡಾವಣೆಗಾಗಿ ಸಾರಿಗೆ ಉಡಾವಣಾ ಡಬ್ಬಿ (ಟಿಎಲ್‌ಸಿ-ಟ್ರಾನ್ಸ್ ಪೋರ್ಟ್ ಲಾಂಚ್ ಕ್ಯಾನಿಸ್ಟರ್) ಮೂಲಕ ಉಡಾವಣೆ ಮಾಡಲಾಯಿತು. ಭೂ ದಾಳಿ ಸಾಮರ್ಥ್ಯದ ಈ ಬ್ರಹ್ಮೋಸ್ ಕ್ಷಿಪಣಿ ಸುಮಾರು 450 ಕಿಮೀ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಂತೆಯೇ ಆಗಸದಲ್ಲಿ ಗರಿಷ್ಠ 15 ಕಿ.ಮೀ ಎತ್ತರದವರೆಗೂ ಹಾರುವ ಈ ಕ್ಷಿಪಣಿ ಭೂಮಿಯ ಮೇಲ್ಮೈ ಮೇಲೆ ಕನಿಷ್ಠ 15 ಮೀಟರ್ ಎತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯಹೊಂದಿದೆ.

ಈ ಬ್ರಹ್ಮೋಸ್ ಕ್ಷಿಪಣಿ ಅಪ್ ಗ್ರೇಡೆಡ್ ಗೈಡೆಡ್ ಸಿಸ್ಟಮ್ ಹೊಂದಿದ್ದು, ಇದರಿಂದ ಕ್ಷಿಪಣಿ ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡುವಂತೆ ನಿಯಂತ್ರಿಸಬಹುದಾಗಿದೆ.2017 ಮಾರ್ಚ್ 11ರಂದು ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು.  ಇದೀಗ ಅದರ ದೂರಗಾಮಿ ಸಾಮರ್ಥ್ಯವನ್ನು ವೃದ್ಧಿಸಿ ಮತ್ತೆ ಪರೀಕ್ಷೆಗೊಳಪಡಿಸಲಾಗಿದೆ. ಈ ಕ್ಷಿಪಣಿಯ ವಿಶೇಷತೆ ಎಂದರೆ ಈ ಹಿಂದಿನ 290 ಕಿ.ಮೀ ದೂರ ಸಾಮರ್ಥ್ಯದ ಕ್ಷಿಪಣಿ ಬಳಕೆ ಮಾಡುತ್ತಿದ್ದ ಅಷ್ಟೇ ಪ್ರಮಾಣದ ಇಂಧನವನ್ನು ಈ ಕ್ಷಿಪಣಿಯೂ ಬಳಕೆ ಮಾಡಿಕೊಂಡು 450 ಕಿ.ಮೀ ದೂರದ ಗುರಿಗಳನ್ನು ಯಶಸ್ವಿಯಾಗಿ ಛಿದ್ರ ಮಾಡುತ್ತದೆ. 

ಅಲ್ಲದೆ ಕ್ಷಿಪಣಿಯ ಇಂಧನ ಬಳಕೆಯನ್ನು ಕಂಪ್ಯೂಟರ್ ಆಧಾರಿತ ಪ್ರೋಗ್ರಾಮ್ ಗಳಿಂದ ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತೆಯೇ ಈ ಕ್ಷಿಪಣಿಯು ಸುಮಾರು 200 ರಿಂದ 300 ಕಿಲೋಗ್ರಾಂ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯು ಸಾಮರ್ಥ್ಯವನ್ನು ಕೂಡ ಹೊಂದಿದೆ. 

ಇನ್ನು ಈ ಭೂ ದಾಳಿ ಸಾಮರ್ಥ್ಯದ ಕ್ಷಿಪಣಿಯು ಫೈರ್ ಅಂಡ್ ಫರ್ಗೆಟ್ (ಕ್ಷಿಪಣಿ ಉಡಾಯಿಸಿ, ಮರೆತು ಬಿಡಿ) ಸಾಮರ್ಥ್ಯವನ್ನು ಹೊಂದಿದೆ. ಅಂದರೆ ನಿಖರ ದಾಳಿಯನ್ನು ಕ್ಷಿಪಣಿಗೆ ತೋರಿ ಉಡಾವಣೆ ಮಾಡಿದರೆ ಕ್ಷಿಪಣಿ ಆ ಗುರಿಯು ಹೇಗೇ ಚಲಿಸಿದರೂ ಅದನ್ನು ಕ್ಷಣ ಮಾತ್ರದಲ್ಲಿ ಛಿದ್ರ ಮಾಡುತ್ತದೆ. ಇದಕ್ಕೆ ಕ್ಷಿಪಣಿಯಲ್ಲಿನ ನ್ಯಾವಿಗೇಷನ್ ಪ್ರೋಗ್ರಾಂ ಸಹಾಯಕವಾಗುತ್ತದೆ. ಅಲ್ಲದೆ ಈ ಕ್ಷಿಪಣಿಯು ಭೂಮಿ, ಸಮುದ್ರದ ಮೇಲಿನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT