ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿರುವ ಚಿತ್ರ 
ದೇಶ

ಕೋವಿಡ್-19: ಮೇ ಮಧ್ಯಭಾಗದಲ್ಲಿ 38 ಸಾವಿರ ಜನರ ಸಾವು, 5.35 ಲಕ್ಷ ಮಂದಿಗೆ ಸೋಂಕು- ಅಂದಾಜು

ಪ್ರಸ್ತುತ ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಂತೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ.

ನವದೆಹಲಿ: ಪ್ರಸ್ತುತ ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಂತೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ.

ಈವರೆಗೂ ಕೋವಿಡ್- 19 ಸೋಂಕಿನಿಂದ 652 ಮಂದಿ ಮೃತಪಟ್ಟಿದ್ದು, ಮೇ ಮಧ್ಯಭಾಗಕ್ಕೆ ಇದರ ಸಂಖ್ಯೆ 38 ಸಾವಿರದ 220ಕ್ಕೆ ಏರಿಕೆಯಾಗಲಿದೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಸುಮಾರು 5. 35 ಲಕ್ಷ ತಲುಪಲಿದ್ದು, ಆಸ್ಪತ್ರೆಗಳಲ್ಲಿ 76 ಸಾವಿರ ಐಸಿಯು ಬೆಡ್ ಗಳ ಅವಶ್ಯಕತ ಬೇಕಾಗಲಿದೆ ಎಂದು ಊಹಿಸಲಾಗಿದೆ. 

ಜವಾಹರ್ ಲಾಲ್ ನೆಹರು ಅಡ್ವಾಸ್ಡ್ ಸೈಂಟಿಪಿಕ್ ರಿಸರ್ಚ್ ಸೆಂಟರ್ (ಜೆಎನ್ ಸಿಎಸ್ ಆರ್ ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ , ಬಾಂಬೆ ಐಐಟಿ ಮತ್ತು ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜುಗಳ 'ಕೋವಿಡ್-19 ಮೆಡ್ ಇನ್ವೆಂಟರಿ- ಶೈಕ್ಷಣಿಕ ಉಪಕ್ರಮದ ಸಂಖ್ಯಾಶಾಸ್ತ್ರೀಯ ಮಾದರಿ ಆಧಾರದಲ್ಲಿ ಹೀಗೆ ಅಂದಾಜಿಸಲಾಗಿದೆ.ಇದನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿಎಸ್‌ಎ) ಕೆ ವಿಜಯರಾಘವನ್  ಒಪ್ಪಿಕೊಂಡಿದ್ದಾರೆ 

ಇಟಲಿ ಮತ್ತು ನ್ಯೂಯಾರ್ಕ್ ರಾಜ್ಯಗಳಲ್ಲಿನ ಕೋವಿಡ್- 19 ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆಯೂ ಇದೇ ಮಾದರಿಯನ್ನು ಆಧಾರಿಸಿದೆ. ನಿಜವಾದ ಫಲಿತಾಂಶಗಳೊಂದಿಗೆ ನಿಕಟವಾಗಿ ಹೊಂದಾಣಿಕೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. 

ಪ್ರಸ್ತುತದ ಮಾಹಿತಿ ಆಧಾರದಂತೆ ಮೇ 19ರೊಳಗೆ ಸುಮಾರು 38 ಸಾವಿರ ಜನರು ಸಾವನ್ನಪ್ಪುವ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.ಇದರಲ್ಲಿ ಬದಲಾವಣೆಯಾಗಬಹುದು, ಐಸಿಯು ಮತ್ತಿತರ ಆರೋಗ್ಯ ಸಂಬಂಧಿತ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಜೆಎನ್ ಸಿಎಎಸ್ ಆರ್ ಸಹಾಯಕ ಪ್ರೊಫೆಸರ್ ಸಂತೋಷ್ ಅನ್ಸುಮಾಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ನಾಲ್ಕು ವಾರಗಳೊಳಗೆ ಸಂಭವಿಸಲಿರುವ ಸಾವಿನ ಸಂಖ್ಯೆಯನ್ನು ಈ ರೀತಿಯಲ್ಲಿ ಊಹಿಸಲಾಗಿದೆ. ಏಪ್ರಿಲ್ 28ರೊಳಗೆ ಸಾವಿನ ಸಂಖ್ಯೆ 1, 012ಕ್ಕೆ ತಲುಪಲಿದೆ. ಮೇ 5 ರೊಳಗೆ 3258, ಮೇ 12ರೊಳಗೆ 10, 924, ಮೇ 19ರೊಳಗೆ 38,220 ಜನರಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. 

ಮೇ 3ಕ್ಕೆ ಮುಕ್ತಾಯವಾಗಲಿರುವ ಲಾಕ್ ಡೌನ್ ನ್ನು ಈ ಮಾದರಿ ಪರಿಗಣಿಸಿದೆ. ಲಾಕ್ ಡೌನ್ ಮುಗಿದ ನಂತರ ಆಗಬಹುದಾದ ಸಾವಿನ ಮೇಲೆ ಇದು ಪರಿಣಾಮ ಬೀರಲಿದೆ. ಲಾಕ್ ಡೌನ್ ವಿಸ್ತರಣೆಯಾದರೆ ಸಾವಿನ ಸಂಖ್ಯೆಯ ಕಡಿಮೆಯಾಗಬಹುದು ಎಂದು ಊಹಿಸಲಾಗಿದೆ ಎಂದು ಅನ್ಸುಮಾಲಿ ಹೇಳಿದ್ದಾರೆ. 

ಸೋಂಕಿನ ಸಂಖ್ಯೆ ಹೆಚ್ಚಾಗುವುದರಿಂದ ಜಿಲ್ಲಾ ಮಟ್ಟದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪಿಪಿಇ, ವೆಂಟಿಲೇಟರ್, ಅಕ್ಸಿಜನ್, ಮಾಸ್ಕ್ ಮತ್ತಿತರ  ಮೂಲ ಸೌಕರ್ಯ , ಸಲಕರಣೆಗಳ ಖರೀದಿ ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ಈ ಮಾದರಿ ನೆರವಾಗಲಿದೆ ತಜ್ಞರ ತಂಡ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT