ದೇಶ

ಕೋವಿಡ್-19 ಭೀತಿ: ಮಕ್ಕಳ ಭವಿಷ್ಯ ವಿಚಾರವಾಗಿ ಜಗಳ, ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ

Nagaraja AB

ನವದೆಹಲಿ: ಕೋವಿಡ್-19 ಭೀತಿಯಿಂದ ಮಕ್ಕಳ ಭವಿಷ್ಯ ವಿಚಾರವಾಗಿ ದಂಪತಿ ನಡುವೆ ಜಗಳ ಉಂಟಾಗಿ, ಪತ್ನಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಪತ್ನಿ ಕೊಂದ ಬಳಿಕ ಆರೋಪಿ ದೆಹಲಿಯ ಮಡಿಪುರ ಪ್ರದೇಶದ ಪೊಲೀಸ್ ತಾನೇ ಹೋಗಿ ಶರಣಾಗಿದ್ದಾನೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿಯನ್ನು ರಹಿಸುಲ್ ಅಜಾಂ (30) ಎಂದು ಗುರುತಿಸಲಾಗಿದೆ. 

ಜಹಂಗಿರ್ ಪುರಿಯಲ್ಲಿ ಪುಟ್ ವೇರ್ ಅಂಗಡಿ ಇಟ್ಟುಕೊಂಡಿದ್ದ ಅಜಾಂ ಹಾಗೂ ಆತನ ಪತ್ನಿ ಗುಲ್ಶನ್ ನಡುವೆ ಮಕ್ಕಳ ಭವಿಷ್ಯ ವಿಚಾರವಾಗಿ ಜಗಳ ಉಂಟಾಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಕೋಪೊದಿಕ್ತ ಅಜಾಂ ದೊಣ್ಣೆಯಿಂದ ಹೊಡೆದು ಸಾಯಿಸಿರುವುದಾಗಿ ವಿಚಾರಣೆ ವೇಳೆಯಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ಘಟನೆ ಸಂಬಂಧ ಉಪ ವಿಭಾಗೀಯ ಮ್ಯಾಡಿಸ್ಟ್ರೇಟ್ ಪ್ರಕರಣ ದಾಖಲಿಸಿದ್ದಾರೆ. ಅಜಾಂ ಹಾಗೂ ಆತನ ಪತ್ನಿ ವಾಸಿಸುತ್ತಿದ್ದ ಪ್ರದೇಶ ಕೋವಿಡ್-19 ಕಂಟೈನ್ ಮೆಂಟ್ ವಲಯದಲ್ಲಿದೆ ಎಂದು ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ ನಂತರ ಮಾಹಿತಿ ನೀಡಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ. 

SCROLL FOR NEXT