ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ 
ದೇಶ

ಮನ್ ಕಿ ಬಾತ್: ಬಸವ ಜಯಂತಿಯಂದು ಬಸವೇಶ್ವರರ ತತ್ವಾದರ್ಶಗಳ ನೆನೆದ ಪ್ರಧಾನಿ ಮೋದಿ!

ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಸವೇಶ್ವರರ ತತ್ವಾದರ್ಶಗಳ ನೆನೆದು, ಮಾನವ ಕುಲಕ್ಕೆ ಬಸವಣ್ಣ ಅವರ ಕೊಡುಗೆ ಅಪಾರ ಎಂದು ಹೇಳಿದರು.

ನವದೆಹಲಿ: ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಸವೇಶ್ವರರ ತತ್ವಾದರ್ಶಗಳ ನೆನೆದು, ಮಾನವ ಕುಲಕ್ಕೆ ಬಸವಣ್ಣ ಅವರ ಕೊಡುಗೆ ಅಪಾರ ಎಂದು ಹೇಳಿದರು.

ಇಂದು ಬಸವ ಜಯಂತಿ.. ಹೀಗಾಗಿ ಬಸವ ಜಯಂತಿ ನಿಮಿತ್ತ ಇಂದು ಬೆಳಕ್ಕೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ದೇಶದ ಜನತೆಗೆ ಬಸವ ಜಯಂತಿ ಶುಭಾಶಯ ಕೋರಿದ್ದರು. ಬಳಿಕ ತಮ್ಮ ವಾರದ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಬಸವಣ್ಣನವರ ತತ್ವ ಸಿದ್ದಾಂಥಗಳನ್ನು ನೆನೆದ  ಪ್ರಧಾನಿ ಮೋದಿ, 'ಇಂದು ಜಗಜ್ಯೋತಿ ಬಸವೇಶ್ವರರ ಜಯಂತಿ. ಮಾನವ ಕುಲಕ್ಕೆ ಅವರ ಕೊಡುಗೆ ಅಪಾರ. ಈ ಶುಭದಿನದಂದು ಎಲ್ಲರಿಗೂ ಬಸವೇಶ್ವರ ಜಯಂತಿಯ ಶುಭಾಶಯಗಳು ಎಂದು ಹೇಳಿದರು.

ಅಂತೆಯೇ ಬಸವೇಶ್ವರರ ಸಿದ್ಧಾಂತಗಳನ್ನು ಪದೇ ಪದೇ ಓದುವ ಮತ್ತು ಇತರರಿಗೆ ತಿಳಿಸುವ ಸೌಭಾಗ್ಯ ನನ್ನದಾಗಿದೆ. ವಿಶ್ವದಲ್ಲಿರುವ ಎಲ್ಲ ಬಸವೇಶ್ವರ ಅನುಯಾಯಿಗಳಿಗೆ ಬಸವ ಜಯಂತಿಯ ಶುಭಾಶಯಗಳು ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ದೇಶದ ವಿವಿಧೆಡೆ ಕೊರೊನಾ ವಾರಿಯರ್ಸ್​ ಮೇಲೆ ದಾಳಿಯಾಗ್ತಿರೋದನ್ನ ಪ್ರಧಾನಿ ಖಂಡಿಸಿದರು. ಅಲ್ಲದೇ, ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಖಚಿತ ಎಂದರೆ. ಕೊರೊನಾ ಎಲ್ಲರ ಜೀವನ ಹಾಗೂ ಜೀವನ ಶೈಲಿ ಬದಲಿಸಿದೆ. ಇಡೀ ವಿಶ್ವವೇ ಕೊರೊನಾ ವಿರುದ್ಧದ  ಹೋರಾಟದಲ್ಲಿ ಭಾರತವನ್ನು ಗೌರವಿಸುತ್ತಿದೆ ಅಂತಾ ಮೋದಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT