ದೇಶ

ರಾಮ ಮಂದಿರ ಶಿಲಾನ್ಯಾಸ: ಹನುಮಾನ್ ಗಡಿಯಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಕೆ

Srinivasamurthy VN

ಅಯೋಧ್ಯೆ: ಶ್ರೀರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ ಆಯೋಧ್ಯೆಗೆ ತೆರಳಿರುವ ಪ್ರಧಾನಿ ಮೋದಿ ಭೂಮಿ ಪೂಜೆಗೂ ಮುನ್ನ ಹನುಮಾನ್ ಗಡಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

ಲಖನೌನಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ಆಯೋಧ್ಯೆಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಸ್ವಾಗತಿಸಿದರು. ಬಳಿಕ ಉಭಯ ನಾಯಕರು ನೇರವಾಗಿ ಹನುಮಾಗಡಿ ದೇಗುಲಕ್ಕೆ ತೆರಳಿದರು. ಈ ವೇಳೆ ಪ್ರಧಾನಿ ಮೋದಿ ಹನುಮಾನ್ ಗಡಿಯಲ್ಲಿ ರಾಮಭಕ್ತ ಹನುಮನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

ಇನ್ನು ಭೂಮಿ ಪೂಜೆಗೂ ಮುನ್ನ ಪ್ರಧಾನಿ ಮೋದಿ ಶಿಲಾನ್ಯಾಸದ ಸ್ಥಳದಲ್ಲಿ ಒಂದು ಪಾರಿಜಾತ ಸಸಿಯನ್ನು ನೆನಪಿನಾರ್ಥವಾಗಿ ನೆಡಲಿದ್ದಾರೆ. ಬಳಿಕ ನೇರವಾಗಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

SCROLL FOR NEXT