ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಕರೆ 
ದೇಶ

ನವ ಭಾರತ ನಿರ್ಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ನೆರವು: ಅಮಿತ್ ಖರೆ

ಹೊಸ ಶಿಕ್ಷಣ ನೀತಿ ಕಲಿಕೆ ಮತ್ತು ಬೋಧನೆ ಕಡೆಗೆ ಗಮನ ಹರಿಸಿದೆ, ಕೇವಲ ಪದವಿ ಪಡೆಯುವುದಕ್ಕೆ ಅಲ್ಲ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಮಿತ್ ಖರೆ ಹೇಳಿದ್ದಾರೆ.

ನವದೆಹಲಿ: ಹೊಸ ಶಿಕ್ಷಣ ನೀತಿ ಕಲಿಕೆ ಮತ್ತು ಬೋಧನೆ ಕಡೆಗೆ ಗಮನ ಹರಿಸಿದೆ, ಕೇವಲ ಪದವಿ ಪಡೆಯುವುದಕ್ಕೆ ಅಲ್ಲ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಮಿತ್ ಖರೆ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ 'ಎಕ್ಸ್ ಪ್ರೆಶನ್ಸ್' ನ ನೇರ ವೆಬ್ ಕಾಸ್ಟ್ ಸರಣಿಯಲ್ಲಿ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಹಾಗೂ ಹಿರಿಯ ಪತ್ರಕರ್ತ ಕಾವೇರಿ ಬಮ್ಜೈ ಜೊತೆಗೆ ಮಾತನಾಡುತ್ತಾ  ಅಮಿತ್ ಖರೆ ಈ ರೀತಿ ಹೇಳಿದರು.

ಇದನ್ನು ಸಮತಾವಾದಿ ನೀತಿ ಎಂದು ಕರೆದ ಅವರು, ಇದರಿಂದ ಶಿಕ್ಷಣದಲ್ಲಿ ಪ್ರಭುತ್ವದಂತಹ ವಿಷಯಗಳು ಕಡಿಮೆಯಾಗಲು ನೆರವಾಗಲಿದೆ.ಇದು ನಿಖರವಾದ ಬೇರೆ ಮಾರ್ಗವಾಗಿದೆ.ನಮ್ಮ ಮೇಲೆ ಹೆಚ್ಚಿನ ನಿಯಂತ್ರಣ ಹೊಂದುವ ಮೂಲಕ, ನಾವು ಹೆಚ್ಚು ಬೆಂಬಲಿಸುತ್ತಿದ್ದೇವೆ. ಆದರೆ, ಹೊಸ ಶಿಕ್ಷಣ ನೀತಿ ದೇಶದ ಕಡೆಗೆ ಗಮನ ಹರಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ತಿಳಿಸಿದರು.

ಜನರಲ್ಲಿನ ಮನಸ್ಥಿತಿಯನ್ನು ಬದಲಾಯಿಸಿ ಉದ್ಯೋಗ ಸೃಷ್ಟಿಸುವಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇದು ಈ ನೀತಿಯ ದೊಡ್ಡ ಯಶಸ್ಸು ಆಗಿದೆ. ಎರಡು ವೃತ್ತಿಗಳನ್ನು ಆಯ್ಕೆ ಮಾಡಿಕೊಂಡ ಜನರು, ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುವುದು ಈ ನೀತಿಯ ನಮ್ಯತೆ ನೀತಿಯಾಗಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಆಸೆಯಂತೆ ಕಲಿಕೆಯನ್ನು ಹೊಸ ವ್ಯವಸ್ಥೆ ಪ್ರೋತ್ಸಾಹಿಸಲಿದೆ. ಇದರಲ್ಲಿ ಯಾವುದೇ ವಿರುದ್ದವಾದಂತಹ ವಿಷಯಗಳು ಇಲ್ಲದಿರುವುದರಿಂದ ಭಿನ್ನಾಭಿಪ್ರಾಯ ಇಲ್ಲ. ನೂತನ ಶಿಕ್ಷಣ ನೀತಿ ಅನುಷ್ಠಾನ ಸಂಬಂಧ ತಜ್ಞರು ರೂಪುರೇಷೆ ರಚಿಸಲಿದ್ದಾರೆ. ರೂಪುರೇಷೆ ಸಿದ್ಧಪಡಿಸಿದ ನಂತರ ಕಾರ್ಯತಂತ್ರವನ್ನು ಪರಿಚಯಿಸಲಾಗುವುದು, ಸೆಪ್ಚೆಂಬರ್ ನೊಳಗೆ ಮಸೂದೆಯನ್ನು ರಚಿಸಲಾಗುವುದು ಅಷ್ಟರೊಳಗೆ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆಗಳನ್ನು ತಿಳಿಸಬಹುದು ಎಂದು ಅಮಿತ್ ಖರೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT