ಎನ್ 95 ಮಾಸ್ಕ್ 
ದೇಶ

ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ: ಸಂಶೋಧಕರು

ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ ಎಂದು ಸಂಶೋದಕರು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ ಎಂದು ಸಂಶೋದಕರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಅಥವಾ ಕೋವಿಡ್‌–19 ವೈರಸ್ ಹರಡುವಿಕೆಯನ್ನು ಎನ್‌–95 ಮಾಸ್ಕ್ ಗಳು ಪರಿಣಾಮಕಾರಿಯಾಗಿ ತಡೆಯಬಲ್ಲವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಸಂಶೋಧಕರು  ಸೇರಿದಂತೆ ಇತರೆ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. 

ಕೆಮ್ಮುವಾಗ ಮತ್ತು ಸೀನುವಾಗ ಬರುವ ಡ್ರಾಪ್ ಲೆಟ್ ಗಳಿಂದಾಗಿ (ದ್ರವಾಂಶ) ಹೆಚ್ಚಾಗಿ ಕೋವಿಡ್‌–19 ವೈರಾಣುಗಳು ಹರಡುತ್ತವೆ. ಮಾಸ್ಕ್‌ ಧರಿಸದೇ ಇರುವುದರ ಬದಲು ಕೋವಿಡ್‌–19 ಹರಡುವುದನ್ನು ತಡೆಯಲು ಯಾವುದೇ ಮಾದರಿಯ ಮಾಸ್ಕ್ ಧರಿಸುವುದು ಸೂಕ್ತ ಎಂದೂ ಸಂಶೋಧಕರು ತಿಳಿಸಿದ್ದಾರೆ.

‘ಫಿಸಿಕ್ಸ್‌ ಆಫ್‌ ಫ್ಲ್ಯೂಯಿಡ್ಸ್‌’ ಎಂಬ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದ್ದು, ಇಸ್ರೊದ ಪದ್ಮನಾಭ ಪ್ರಸನ್ನ ಸಿಂಹ ಹಾಗೂ ಕರ್ನಾಟಕದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಸನ್ನ ಸಿಂಹ ಮೋಹನ್‌ ರಾವ್‌ ಅವರು, ಕೆಮ್ಮುವಾಗ ಬಾಯಿಯಿಂದ ಹೊರಬರುವ ಕಣಗಳ  ಹರಡುವಿಕೆಯ ಕುರಿತು ನಡೆಸಿದ ಅಧ್ಯಯನದ ವರದಿ ಪ್ರಕಟಿಸಲಾಗಿದೆ.

ಕೆಮ್ಮುವ ಸಂದರ್ಭದಲ್ಲಿ ಕಣಗಳು ಹೆಚ್ಚು ದೂರ ಹರಡುವುದನ್ನು ಎನ್‌–95 ಮಾಸ್ಕ್ ಗಳು ತಡೆಯುತ್ತವೆ. ಮಾಸ್ಕ್ ಇಲ್ಲದೇ ಕೆಮ್ಮಿದ ಸಂದರ್ಭದಲ್ಲಿ ಬಾಯಿಯಿಂದ ಕಣಗಳು 3 ಮೀಟರ್‌ವರೆಗೆ ಹರಡುತ್ತವೆ. ಸಾಮಾನ್ಯ ಮಾಸ್ಕ್ ಗಳನ್ನು ಧರಿಸಿದರೂ ಇದರ ಹರಡುವಿಕೆ ದೂರ 0.50 ರಿಂದ 1.5 ಮೀಟರ್‌ಗೆ‌  ಇಳಿಕೆಯಾಗುತ್ತದೆ. ಅದೇ ಎನ್‌–95 ಮುಖಗವಸುಗಳನ್ನು ಧರಿಸಿದರೆ ಈ ದೂರ 0.25ಕ್ಕೆ ಇಳಿಕೆಯಾಗುತ್ತದೆ’ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT