ದೇಶ

ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಶವ ಪತ್ತೆ

Srinivas Rao BV

ಕೂಚ್ ಬೆಹಾರ್: ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದ್ದು, ಶಾಲಾ ಕಟ್ಟಡದ ಸೀಲಿಂಗ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದೆ.

ಕೂಚ್ ಬೆಹಾರ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ತನ್ನ ಕಾರ್ಯಕರ್ತನ ಹತ್ಯೆಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಸ್ವಪನ್ ದಾಸ್ (30) ಮೃತ ದುರ್ದೈವಿಯಾಗಿದ್ದು, ತೂಫಾನ್ ಗಂಜ್ ನ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆ ವರದಿಗೆ ಕಳಿಸಲಾಗಿದೆ.

ಟಿಎಂಸಿಗೆ ಸೇರಿದ ದುಷ್ಕರ್ಮಿಗಳು ಸ್ವಪನ್ ದಾಸ್ ನ್ನು ಹತ್ಯೆ ಮಾಡಿದ್ದು, ಆತನ ಶವವನ್ನು ನೇಣು ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ನೆಲದ ಮೇಲೆ ರಕ್ತದ ಕಲೆ ಇತ್ತು, ಆತನ ಕಾಲುಗಳು ನೆಲಕ್ಕೆ ಮುಟ್ಟುತ್ತಿದ್ದವು, ಇದು ಟಿಎಂಸಿ ಕಾರ್ಯಕರ್ತರಿಂದ ನಡೆಯುತ್ತಿರುವ ಹಲ್ಲೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಬಿಜೆಪಿ ಆರೋಪವನ್ನು ಟಿಎಂಸಿ ನಿರಾಕರಿಸಿದ್ದು, ಪ್ರತಿಯೊಂದು ಅಸ್ವಾಭಾವಿಕ ಸಾವುಗಳಿಗೂ ಟಿಎಂಸಿಗೆ ಸಂಬಂಧ ಕಲ್ಪಿಸುವ ಅಗ್ಗದ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದೆ.

SCROLL FOR NEXT