ದೇಶ

ಟಿ ಶರ್ಟ್, ಜೀನ್ಸ್ ಧರಿಸಿ ಕಚೇರಿಗೆ ಬರುವಂತಿಲ್ಲ! ಮಹಾರಾಷ್ಟ್ರ ಸರ್ಕಾರದಿಂದ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಡ್ರೆಸ್ ಕೋಡ್

ಜೀನ್ಸ್ ಮತ್ತುಟಿ ಶರ್ಟ್ ಕೆಲವರ ಪಾಲಿಗೆ ಒತ್ತಡ ಕಡಿಮೆ ಮಾಡುತ್ತದೆ. ಆದರೆ ಇನ್ನು ಮುಂದೆ ಮಹಾರಾಷ್ಟ್ರದ ಸರ್ಕಾರಿ ಉದ್ಯೋಗಿಗಳು ಇಂತಹಾ ಒತ್ತಡರಹಿತ ಉಡುಪು ಧರಿಸಿ ಕಚೇರಿಗೆ ಬರುವಂತಿಲ್ಲ.  ಮಾತ್ರವಲ್ಲ ಕಾಲುಗಳಿಗೆ ಗಾಳಿಯಾಡಬಲ್ಲ ಲೈಟ್ ವೈಟ್ ಚಪ್ಪಲಿ ಧರಿಸುವಂತಿಲ್ಲ. 

ಮುಂಬೈ: ಜೀನ್ಸ್ ಮತ್ತುಟಿ ಶರ್ಟ್ ಕೆಲವರ ಪಾಲಿಗೆ ಒತ್ತಡ ಕಡಿಮೆ ಮಾಡುತ್ತದೆ. ಆದರೆ ಇನ್ನು ಮುಂದೆ ಮಹಾರಾಷ್ಟ್ರದ ಸರ್ಕಾರಿ ಉದ್ಯೋಗಿಗಳು ಇಂತಹಾ ಒತ್ತಡರಹಿತ ಉಡುಪು ಧರಿಸಿ ಕಚೇರಿಗೆ ಬರುವಂತಿಲ್ಲ.  ಮಾತ್ರವಲ್ಲ ಕಾಲುಗಳಿಗೆ ಗಾಳಿಯಾಡಬಲ್ಲ ಲೈಟ್ ವೈಟ್ ಚಪ್ಪಲಿ ಧರಿಸುವಂತಿಲ್ಲ. 

ಹೌದು ಮಹಾರಾಷ್ಟ್ರ ಸರ್ಕಾರ ಸರ್ಕಾರಿ ನೌಕರರಿಗೆ ನೂತನ ಡ್ರೆಸ್ ಕೋಡ್ ಜಾರಿ ಮಾಡಿದೆ. ಅದರಂತೆ ಸರ್ಕಾರಿ ನೌಕರರು ಕೈಮಗ್ಗದ ಬಟ್ಟೆಯನ್ನು ಉತ್ತೇಜಿಸುವ ಸಲುವಾಗಿ ಶುಕ್ರವಾರ ಒಂದು ದಿನದ ಮಟ್ಟಿಗಾದರೂ ಖಾದಿ ಬಟ್ಟೆಗಳನ್ನು ಧರಿಸಬೇಕು ಎಂದು ಆದೇಶಿಸಿದೆ. ಈ ಕುರಿತಂತೆ ಸರ್ಕಾರ ಡಿಸೆಂಬರ್ 8 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ತಿಳಿಸಿದೆ.

"ಹಲವಾರು ಅಧಿಕಾರಿಗಳು / ಸಿಬ್ಬಂದಿ (ಮುಖ್ಯವಾಗಿ ಗುತ್ತಿಗೆ ಸಿಬ್ಬಂದಿ ಮತ್ತು ಸರ್ಕಾರಿ ಕೆಲಸದಲ್ಲಿ ತೊಡಗಿರುವ ನೌಕರರು ) ಸರ್ಕಾರಿ ನೌಕರಿಗೆ ಸೂಕ್ತವಾದ ಉಡುಪನ್ನು ಧರಿಸುವುದಿಲ್ಲ ಎಂದು ಗಮನಿಸಿದ್ದೇವೆ. ಆದ್ದರಿಂದ, ಸರ್ಕಾರಿ ನೌಕರರ ಬಗೆಗಿನ ಜನರ ಭಾವನೆ ಕಳಪೆ ಮಟ್ಟದಲ್ಲಿದೆ.  ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಿಗಳಿಂದ ಜನರು "ಉತ್ತಮ ನಡವಳಿಕೆ ಮತ್ತು ವ್ಯಕ್ತಿತ್ವ" ವನ್ನು ನಿರೀಕ್ಷಿಸುತ್ತಾರೆ. ಅದಕ್ಕಾಗಿ "ಅಧಿಕಾರಿಗಳು ಮತ್ತು ನೌಕರರ ಉಡುಪು ಅದಕ್ಕೆ ಸೂಕ್ತ ರೀತಿಯಲ್ಲಿರಬೇಕು. ಉಡುಪು ಸಾಮಾನ್ಯ ಗೌರವಯುತವಾಗಿಲ್ಲದೆ ಹೋದಲ್ಲಿ ಅದು ಅವರ ಕೆಲಸದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ" ಎಂದು ಸುತ್ತೋಲೆ ತಿಳಿಸಿದೆ.

ಸರ್ಕಾರಿ ಉದ್ಯೋಗಿಗಳ ಉಡುಪು ಸರಿಯಾಗಿಯೂ, ಸ್ವಚ್ಚವಾಗಿಯೂ ಇರಬೇಕು. ಮಹಿಳಾ ಉದ್ಯೋಗಿಗಳು ಸೀರೆ, ಸಲ್ವಾರ್, ಚೂಡಿದಾರ್, ಕುರ್ತಾ, ಪ್ಯಾಂಟ್ ಮತ್ತು ಶರ್ಟ್ ಜೊತೆಗೆ ದುಪಟ್ಟಾಗಳನ್ನು ಧರಿಸಬಹುದು. ಪುರುಷ ಉದ್ಯೋಗಿಗಳು ಶರ್ಟ್ ಮತ್ತು "ಪ್ಯಾಂಟ್ ಧರಿಸಬೇಕು.

"ತೀಕ್ಷ್ಣವಾದ ಬಣ್ಣಗಳು, ವಿಚಿತ್ರವಾದ ಕಸೂತಿ ಮಾದರಿಗಳು ಅಥವಾ ಚಿತ್ರಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಬಾರದು. ಅಲ್ಲದೆ, ನೌಕರರು ಮತ್ತು ಸಿಬ್ಬಂದಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟಿ ಶರ್ಟ್ ಧರಿಸಬಾರದು" ಎಂದು ಸುತ್ತೋಲೆ ಆದೇಶಿಸಿದೆ. ಅಲ್ಲದೆ ಮಹಿಳಾ ಉದ್ಯೋಗಿಗಳು ಚಪ್ಪಲ್, ಸ್ಯಾಂಡಲ್ ಅಥವಾ ಬೂಟುಗಳನ್ನು ಧರಿಸಬೇಕು ಮತ್ತು ಪುರುಷರು ಶೂ ಅಥವಾ ಸ್ಯಾಂಡಲ್ ಧರಿಸಬೇಕು ಎಂದು ಹೇಳಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT