ದೇಶ

ನಾಗಪುರ: ಹಿರಿಯ ಆರ್ ಎಸ್ ಎಸ್ ವಿಚಾರವಾದಿ ಎಂಜಿ ವೈದ್ಯ ನಿಧನ

Nagaraja AB

ನಾಗಪುರ: ಹಿರಿಯ ಆರ್ ಎಸ್ ಎಸ್ ವಿಚಾರವಾದಿ ಮತ್ತು ಸಂಸ್ಥೆಯ ಮೊದಲ ವಕ್ತಾರ ಮಾಧವ್ ಗೋವಿಂದ್ ವೈದ್ಯ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.

ಇಂದು ಮಧ್ಯಾಹ್ನ 3-35ರಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಜಿ ವೈದ್ಯ ಕೊನೆಯುಸಿರೆಳೆದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಇತ್ತಿಚೀಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಎಂಜಿ ವೈದ್ಯ ಬಳಿಕ ಚೇತರಿಸಿಕೊಂಡಿದ್ದರು. ಆದಾಗ್ಯೂ, ಶುಕ್ರವಾರ ಇದ್ದಕ್ಕಿದ್ದಂತೆ ಆರೋಗ್ಯ ಕ್ಷೀಣಿಸಿದ್ದು, ಇಂದು ಮೃತಪಟ್ಟಿರುವುದಾಗಿ ಅವರ ಮೊಮ್ಮಗ ವಿಷ್ಣು ವೈದ್ಯ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

SCROLL FOR NEXT