ಸೋನಾಲ್ ಮಾನ್ಸಿಂಗ್ 
ದೇಶ

ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಹಕ್ಕುಚ್ಯುತಿ ನೋಟೀಸ್ ದಾಖಲಿಸಿದ ಸಂಸದೆ ಸೋನಾಲ್ ಮಾನ್ಸಿಂಗ್

ವಿವಾದಾತ್ಮಕ ಕೃಷಿ ಮಸೂದೆಗಳ ಕುರಿತು ದೆಹಲಿ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯಸಭೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ರಾಜ್ಯಸಭಾ ಸಂಸದೆ ಸೋನಾಲ್ ಮಾನ್ಸಿಂಗ್ ಆರೋಪಿಸಿದ್ದು ಕೇಜ್ರಿವಾಲ್ ವಿರುದ್ಧ ಹಕ್ಕುಚ್ಯುತಿ ನೋಟೀಸ್ ದಾಖಲಿಸಿದ್ದಾರೆ.

ನವದೆಹಲಿ: ವಿವಾದಾತ್ಮಕ ಕೃಷಿ ಮಸೂದೆಗಳ ಕುರಿತು ದೆಹಲಿ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯಸಭೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ರಾಜ್ಯಸಭಾ ಸಂಸದೆ ಸೋನಾಲ್ ಮಾನ್ಸಿಂಗ್ ಆರೋಪಿಸಿದ್ದು ಕೇಜ್ರಿವಾಲ್ ವಿರುದ್ಧ ಹಕ್ಕುಚ್ಯುತಿ ನೋಟೀಸ್ ದಾಖಲಿಸಿದ್ದಾರೆ.

ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದ ನೋಟಿಸ್‌ನಲ್ಲಿ, ಬಿಜೆಪಿ ಬೆಂಬಲ ಹೊಂದಿರುವ ನಾಮನಿರ್ದೇಶಿತ ಸಂಸದೆ, ಕೇಜ್ರಿವಾಲ್ ಅವರ ಹೇಳಿಕೆಯನ್ನು ಆಕ್ಷೇಪಿಸಿದ್ದು, "ಸದನದ ಅಧ್ಯಕ್ಷರು ಮೂರು ಕೃಷಿ ಸುಧಾರಣಾ ಮಸೂದೆಗಳನ್ನು ಅಂಗೀಕರಿಸುವುದಾಗಿ ಘೋಷಿಸಿದಾಗ ಪ್ರತಿಪಕ್ಷ ಸದಸ್ಯರು ಇದಕ್ಕಾಗಿ ಮತದಾನಕ್ಕೆ ಒತ್ತಾಯಿಸಿದ್ದಾರೆ."

ಹಿಂದಿಯಲ್ಲಿ ಮಾಡಿದ ಭಾಷಣವನ್ನು ಉಲ್ಲೇಖಿಸಿ, ಮಾನ್ಸಿಂಗ್ ತನ್ನ ನೋಟಿಸ್‌ನಲ್ಲಿ "ರಾಜ್ಯಸಭೆಯಲ್ಲಿ ಯಾವುದೇ ಮತದಾನವಿಲ್ಲದೆ ಮೂರು ಮಸೂದೆಗಳನ್ನು ಅಂಗೀಕರಿಸಿದ್ದು ಇದೇ ಮೊದಲು ಎಂದು ಕೇಜ್ರಿವಾಲ್ ಹೇಳಿದ್ದಾರೆ. "ಅರವಿಂದ್ ಕೇಜ್ರಿವಾಲ್ ಅವರ ಮೇಲೆ ತಿಳಿಸಿದ ಮಾತುಗಳು ನಿಯಮಗಳ ಗಂಭೀರ ಉಲ್ಲಂಘನೆ ಮಾತ್ರವಲ್ಲದೆ ಸದನದ ಬಗೆಗಿನ ತಿರಸ್ಕಾರವೂ ಸಹ ಹೌದು, ಇದು ಅಧ್ಯಕ್ಷರು, ರಾಜ್ಯಸಭೆ ಮತ್ತು ಭಾರತದ ಸಂಸತ್ತಿನ ಮೇಲ್ಮನೆಯ ಪ್ರತಿಷ್ಠೆಯನ್ನು ಖಂಡಿಸುವಪ್ರಯತ್ನವಾಗಿದೆ." ಎಂದಿದ್ದಾರೆ.

ಅಧ್ಯಕ್ಷರಿಗೆ ಬುಧವಾರ ನೋಟಿಸ್ ಸಲ್ಲಿಸಲಾಗಿದೆ.

"ವಾಸ್ತವಿಕವಾಗಿ, ರಾಜ್ಯಸಭೆಯು ಸಾಮಾನ್ಯ ಒಗ್ಗಟ್ಟಿನ ಪ್ರದರ್ಶನದಲ್ಲಿ ಈ ಮಸೂದೆಗಳನ್ನು ಸರ್ವಾನುಮತದಿಂದ ಅಂಗೀಕರಿಸಿತು, ಈ ಮಸೂದೆಗಳು ದೇಶದ ರೈತಸಮುದಾಯದ ಕಲ್ಯಾಣಕ್ಕೆ ಆಧಾರವಾಗಿವೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಿದೆ" ಎಂದು ಅವರು ಹೇಳಿದರು.

ಸೆಪ್ಟೆಂಬರ್ 20 ರಂದು ಸದನದಲ್ಲಿ ಮಸೂದೆಗಳನ್ನು ಅಂಗೀಕರಿಸಲಾಯಿತು, ವಿರೋಧ ಪಕ್ಷದ ಹಲವಾರು ನಾಯಕರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಕೆಲವು ಸದಸ್ಯರು ಮತಗಳ ವಿಭಜನೆಯನ್ನು ಕೋರಿದ್ದರು ಆದರೆ ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಅದನ್ನು ತಳ್ಳಿಹಾಕಿದ್ದರು. ಆ ನಂತರ ಧ್ವನಿಮತದಿಂದ ಮಸೂದೆಗಳನ್ನು ಅಂಗೀಕಾರ ಮಾಡಲಾಯಿತು.

ಆಮ್ ಆದ್ಮಿ ಪಕ್ಷದ ಮುಖಂಡರ ವಿರುದ್ಧ ಕ್ರಮಕೈಗೊಳ್ಳಲು ಕೋರಿ ಮಾನ್ಸಿಂಗ್, "ಅರವಿಂದ್ ಕೇಜ್ರಿವಾಲ್, ದೆಹಲಿಯ ವಿಧಾನಸಭೆಯಲ್ಲಿ ಮೇಲೆ ತಿಳಿಸಿದ ಧರ್ಮನಿಂದೆಯ ಮಾತುಗಳನ್ನು ಹೇಳಿದ ನಂತರ, ಎಲ್ಲಾ ಮೂರು ಕೃಷಿ ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿದರು. ಕೇಜ್ರಿವಾಲ್ ಅವರ ಈ ಕೃತ್ಯವು ತಿರಸ್ಕಾರಕ್ಕೆ ಅರ್ಹವಾಗಿದೆ. ರಾಜ್ಯಸಭೆ ಮತ್ತು ವಿಷಯದ ಸಂಬಂಧಿತ ನಿಯಮಗಳ ಅಡಿಯಲ್ಲಿ ಶಿಕ್ಷಾರ್ಹ." ಎಂದಿದ್ದಾರೆ.

ಆಕೆಯ ನೋಟಿಸ್ ಬಗೆಗೆ ಕ್ರಮ ಕೈಗೊಳ್ಳಬೇಕೆ ಎಂದು ರಾಜ್ಯಸಭಾ ಅಧ್ಯಕ್ಷರು ಈಗ ನಿರ್ಧರಿಸುತ್ತಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಂದು ವೇಳೆ ಅವರು ಹಾಗೆ ಭಾವಿಸಿದರೆ, ಅವರು ಅದನ್ನು ಸದನದಸಮಿತಿಗೆ ಕಳುಹಿಸಬಹುದು, ಅದು ಕೇಜ್ರಿವಾಲ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ವಿಧಾನಸಭೆಯನ್ನು ಕೇಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT