ದೇಶ

ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಾಯನಂದ ಜೈಲಿನಿಂದ ಬಿಡುಗಡೆ

Nagaraja AB

ಲಖನೌ: ಕಾನೂನು ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಹಜಾನ್ ಪುರ ಜೈಲಿನಲ್ಲಿದ್ದ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಾಯನಂದ ಜಾಮೀನಿನ ಆಧಾರದ ಮೇಲೆ  ಜೈಲಿನಿಂದ ಇಂದು ಹೊರಗೆ ಬಂದಿದ್ದಾರೆ.

ಕಾನೂನು ನಿಯಮಗಳನ್ನು ಪಾಲಿಸಿದ ನಂತರ ಜಿಲ್ಲಾ ಕಾರಾಗೃಹದಿಂದ 72 ವರ್ಷದ ಚಿನ್ಮಾಯನಂದ ಹೊರಗೆ ಬಂದಿದ್ದಾರೆ ಎಂದು ಕಾರಾಗೃಹ ಮಹಾನಿರ್ದೇಶಕ ರಾಕೇಶ್ ಕುಮಾರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸೋಮವಾರ ಅಲಹಾಬಾದ್ ಕೋರ್ಟ್ ಜಾಮೀನು ನೀಡಿತ್ತು. ಆದರೆ, ಜಾಮೀನು ಪ್ರತಿ ಜೈಲಿಗೆ  ಕಳುಹಿಸದ ಹಿನ್ನೆಲೆಯಲ್ಲಿ ಬಿಡುಗಡೆ ವಿಳಂಬವಾಗಿತ್ತು. 

ಹೈಕೋರ್ಟ್ ಜಾಮೀನು ನೀಡುವ ಜೊತೆಗೆ ಚಿನ್ಮಾಯನಂದ ವಿಚಾರಣೆಯನ್ನು ಶಹಜಾನ್ ಪುರದಿಂದ ಲಖನೌಗೆ ವರ್ಗಾಯಿಸಿದೆ. 

SCROLL FOR NEXT