ಕ್ಯಾರೋಲಿನ್ ಮಲ್ಸಾಮ್ಟ್ಲುವಾಂಗಿ 
ದೇಶ

ತಾನು ರಕ್ಷಿಸಿದ ಬಾಲಕಿಯೊಂದಿಗೆ ಪ್ರಶಸ್ತಿ ಹಣ ಹಂಚಿಕೊಂಡ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ ವಿದ್ಯಾರ್ಥಿನಿ!

ಮಿಜೋರಾಂನ  ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತೆ ಕ್ಯಾರೋಲಿನ್ ಮಲ್ಸಾಮ್ಟ್ಲುವಾಂಗಿ ಕೇವಲ ಧೈರ್ಯಶಾಲಿ ಮಾತ್ರವಲ್ಲ, ಉದಾರವಾದಿಯೂ ಆಗಿದ್ದಾರೆ

ಗುವಾಹಟಿ: ಮಿಜೋರಾಂನ  ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತೆ ಕ್ಯಾರೋಲಿನ್ ಮಲ್ಸಾಮ್ಟ್ಲುವಾಂಗಿ ಕೇವಲ ಧೈರ್ಯಶಾಲಿ ಮಾತ್ರವಲ್ಲ, ಉದಾರವಾದಿಯೂ ಆಗಿದ್ದಾರೆ

11 ವರ್ಷದ ಈ ವಿದ್ಯಾರ್ಥಿನಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯಿಂದ ಬಂದಂತಹ ಹಣದಲ್ಲಿ ಶೇ 50 ಅಂದರೆ 10 ಸಾವಿರ ರೂ.ನ್ನು ತಾನು ಅಪಹರಣಕಾರರಿಂದ  ರಕ್ಷಿಸಿದ ಬಾಲಕಿಗೆ ನೀಡುವ ಮೂಲಕ ಉದಾರತೆ ಮೆರಿದಿದ್ದಾಳೆ.ಅಲ್ಲದೇ, ದೆಹಲಿಯಿಂದ ಬಟ್ಟೆ ಹಾಗೂ ಬೆಳ್ಳಿ ನೆಕ್ಲೇಸ್ ತಂದು ಕೊಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾಳೆ

ಕಳೆದ ವಾರ ಬಾಲಕಿ ಮನೆಗೆ ಭೇಟಿ ನೀಡಿದ ಕ್ಯಾರೋಲಿನ್  ಅದ್ದೂರಿ ಸ್ವಾಗತ ನೀಡಲಾಗಿದೆ. ಬಾಲಕಿಯ ಕುಟುಂಬದವರು ಬಡವರು ಎಂಬುದು ತಿಳಿದ ನಂತರ ಪ್ರಶಸ್ತಿಯಲ್ಲಿ ಬಂದಂತಹ ಸ್ವಲ್ಪ ಹಣವನ್ನು  ನೀಡಿರುವುದಾಗಿ ಕ್ಯಾರೋನಿನ್ ತಾಯಿ ತಿಳಿಸಿದರು. 

ಕಳೆದ ವರ್ಷ ಜೂನ್ ತಿಂಗಳಲ್ಲಿ  ಕ್ಯಾರೋಲಿನ್   ತನ್ನ ಸ್ನೇಹಿತರೊಂದಿಗೆ ಮನೆಯ ಹಿಂಭಾಗ ಆಟವಾಡುತ್ತಿದ್ದಾಗ, ಅಪರಿಚಿತ ಬಾಲಕಿಯೊಂದು ಅವರ ಗುಂಪು ಸೇರಿತ್ತು. ಆದರೆ, ಹೆಚ್ಚಿನ ಗಮನ ಹರಿಸಿರಲಿಲ್ಲ. ಮಾರನೇ ದಿನ ಪೊಲೀಸರು ಬಂದು ನಾಪತ್ತೆಯಾಗಿರುವ ಬಾಲಕಿಗಾಗಿ ಶೋಧ ಕಾರ್ಯ ನಡೆಸಿ, ಈ ಬಾಲಕಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಹೇಳಿ ಹೊರಟು ಹೋಗಿದ್ದರು. 

ತಕ್ಷಣ ಕಾರ್ಯಪ್ರವೃತ್ತರಾದ ಕ್ಯಾರೋಲಿನ್ ನೇತೃತ್ವದ ತಂಡ ಬಾಲಕಿಯನ್ನು ಪತ್ತೆ ಹಚ್ಚಿತ್ತು. ಆದರೆ, ಅಪಹರಣಕಾರರು ಆಕೆಯಿಂದ ಬಾಲಕಿಯನ್ನು ಪಡೆಯಲು ಯತ್ನಿಸಿದಾಗ ಬಾಲಕಿಯನ್ನು ಬೆನ್ನಿಗೆ ಕಟ್ಟಿಕೊಂಡು ಓಡಿ ಹೋಗುವ ಮೂಲಕ ಆ ಬಾಲಕಿಯನ್ನು ರಕ್ಷಿಸಲಾಗಿತ್ತು. 

ಅಪಹರಣಕಾರರು ಕಲ್ಲಿನಿಂದ ಹೊಡೆದರೂ ಬಾಲಕಿಯನ್ನು ಮನೆಯವರೆಗೂ ಎತ್ತುಕೊಂಡು ಹೋಗಿದ್ದ ಕ್ಯಾರೋಲಿನ್ ನಂತರ ಎಲ್ಲಾ ಮಾಹಿತಿಯನ್ನು ಆಕೆಯ ಪೋಷಕರಿಗೆ ವಿವರಿಸಲಾಗಿತ್ತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT