ದೇಶ

ಸಿದ್ಧಾಂತ ಶಿಖಾಮಣಿ ಉಚಿತ ಇ- ಬುಕ್ ಲೋಕಾರ್ಪಣೆಗೊಳಿಸಿದ ಪ್ರಧಾನಿ

Srinivas Rao BV

ವಾರಣಾಸಿ: ಕೇವಲ ಸರ್ಕಾರಗಳಿಂದ ದೇಶ ನಿರ್ಮಾಣಗೊಂಡಿಲ್ಲ, ಸಂಸ್ಕೃತಿ ಹಾಗೂ ಪ್ರತಿಯೊಬ್ಬ ನಾಗರೀಕನ ಮೌಲ್ಯಗಳಿಂದ ದೇಶ ನಿರ್ಮಾಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದ ಪ್ರತಿಯೊಬ್ಬ ನಾಗರೀಕನ ಚಾರಿತ್ರ್ಯ ನವ ಭಾರತದ ಭವಿಷ್ಯ, ದಿಶೆಯನ್ನು ನಿರ್ಧರಿಸಲಿದೆ ಎಂದರು. ದೇಶವನ್ನು ಶಕ್ತಿ ಸಾಮರ್ಥ್ಯದಿಂದ ರೂಪಿಸಲಾಗಿಲ್ಲ, ಸಂಸ್ಕೃತಿ ಹಾಗೂ ನಮ್ಮ ಜನರ ಸಾಮರ್ಥ್ಯದ ಮೇಲೆ ನಿರ್ಮಾಣಗೊಂಡಿದೆ ಎಂದರು. 

ಹರ ..ಹರ ಮಹದೇವ್, ಎಲ್ಲರಿಗೂ ನಮಸ್ಕಾರ, ವೇದಿಕೆಯಲ್ಲಿರುವ ವೀರಶೈವ ಪಂಚಪೀಠದ ಜಗದ್ಗುರುಗಳಿಗೆ ನಮಸ್ಕಾರಗಳು ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿ ಜಂಗಮವಾಡಿ ಮಠದಲ್ಲಿ ನೆರೆದಿದ್ದ ಕನ್ನಡಿಗರು ಪುಳಕಗೊಳ್ಳುವಂತೆ ಮಾಡಿದರು. ಇದೇ ವೇಳೆ ಸಿದ್ಧಾಂತ ಶಿಖಾಮಣಿ ಉಚಿತ ಇ-ಬುಕ್ ನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.

SCROLL FOR NEXT