ದೇಶ

ತಮಿಳುನಾಡಿನಲ್ಲಿ ಎರಡು ಓಮ್ನಿ ಬಸ್‌ಗಳ ಡಿಕ್ಕಿ: ನೇಪಾಳದ ಆರು ಪ್ರವಾಸಿಗರು ಸಾವು, 28 ಮಂದಿಗೆ ಗಾಯ

Sumana Upadhyaya

ಸೇಲಂ: ತಮಿಳುನಾಡಿನ ಸೇಲಂ ಜಿಲ್ಲೆಯ ಒಮಲೂರು ಬಳಿಯ ನಾರಿಪಲ್ಲಂನಲ್ಲಿ ಕಳೆದ ಮಧ್ಯರಾತ್ರಿ ಎರಡು ಓಮ್ನಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ನೇಪಾಳದ ಆರು ಪ್ರವಾಸಿಗರು ಮೃತಪಟ್ಟಿದ್ದು, ಇತರ 28 ಮಂದಿ ಗಾಯಗೊಂಡಿದ್ದಾರೆ.

ಕಠ್ಮಂಡುವಿನಿಂದ 34 ಪ್ರವಾಸಿಗರ ತಂಡ ಕನ್ಯಾಕುಮಾರಿಗೆ ಭೇಟಿ ನೀಡಿದ ನಂತರ ಓಮ್ನಿ ಬಸ್‌ನಲ್ಲಿ ರಾಜಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನೇಪಾಳ ಪ್ರವಾಸಿಗರು ರಾತ್ರಿಯಿಡೀ ದೇವಾಲಯದ ಹಾಲ್ ನಲ್ಲಿ ವಿಶ್ರಾಂತಿ ಪಡೆದು ಗುರುವಾರ ಬೆಳಿಗ್ಗೆ ಪ್ರಯಾಣ ಮುಂದುವರಿಸಲು ನಿರ್ಧರಿಸಿದ್ದರು.
  
ನೇಪಾಳದ ಪ್ರವಾಸಿಗರಿದ್ದ ಓಮ್ನಿ ಬಸ್‌ನ ಚಾಲಕ ಮತ್ತೊಂದು ಓಮ್ನಿ ಬಸ್ ಲೇನ್‌ನಲ್ಲಿ ಸಮೀಪಿಸುತ್ತಿರುವುದನ್ನು ಗಮನಿಸದೆ ರಸ್ತೆಯ ಇನ್ನೊಂದು ಲೇನ್‌ಗೆ ವಾಹನವನ್ನು ತಿರುಗಿಸಿದಾಗ  ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
  
ಬೆಂಗಳೂರಿನಿಂದ ತಿರುವನಂತಪುರಂಗೆ ತೆರಳುತ್ತಿದ್ದ ಮತ್ತೊಂದು ಓಮ್ನಿ ಬಸ್ ಗೆ ನೇಪಾಳದ ಪ್ರವಾಸಿ ಓಮ್ನಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮಹಿಳೆ ಸೇರಿದಂತೆ ಆರು ನೇಪಾಳ ಪ್ರಜೆಗಳು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
  ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT