ನವದೆಹಲಿ: ಸಿಎಎ ವಿರೋಧಿ ಹಿಂಸಾಚಾರದಲ್ಲಿ ಅರೆಸೇನಾಪಡೆಗಳ ಮೇಲೆ ಆಸಿಡ್ ದಾಳಿ ನಡೆದಿದೆ.
ದೆಹಲಿಯ ಕರ್ವಾಲ್ ನಗರ್ ದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆಂದು ನೇಮಕ ಮಾಡಲಾಗಿದ್ದ ಅರೆಸೇನಾಪಡೆ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ್ದಾರೆ ಎಂದು ಟೈಮ್ಸ್ ನೌ ವರದಿ ಪ್ರಕಟಿಸಿದೆ.
ವರದಿಯ ಪ್ರಕಾರ ಅರೆಸೇನಾಪಡೆಗಳು ಹಿಂಸಾಚಾರ ನಡೆಯುತ್ತಿರುವ ಪ್ರದೇಶ ಪ್ರವೇಶಿಸಲು ಯತ್ನಿಸಿದಾಗ ಆಸಿಡ್ ದಾಳಿ ನಡೆದಿದ್ದು, ಸಿಬ್ಬಂದಿಗಳಿಗೆ ಸುಟ್ಟಗಾಯಗಳಾಗಿವೆ. ಚಿಕಿತ್ಸೆಗಾಗಿ ಸಿಬ್ಬಂದಿಗಳನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.