ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ ಎಸ್ ಧನೋವಾ 
ದೇಶ

ಅನಾಣ್ಯೀಕರಣ ನಂತರ ವಾಯುಪಡೆ 625 ಟನ್ ಹೊಸ ನೋಟುಗಳನ್ನು ಸಾಗಿಸಿತ್ತು: ವಾಯುಪಡೆ ಮಾಜಿ ಮುಖ್ಯಸ್ಥ 

2016ರಲ್ಲಿ ನೋಟು ಅನಾಣ್ಯೀಕರಣ ನಂತರ ಭಾರತೀಯ ವಾಯುಪಡೆ 625 ಟನ್ ಗಳಷ್ಟು ಹೊಸ ನೋಟುಗಳನ್ನು ದೇಶದ ವಿವಿಧ ಕಡೆಗಳಿಗೆ ಸಾಗಾಟ ಮಾಡಿದೆ ಎಂದು ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ ಎಸ್ ಧನೋವಾ ಹೇಳಿದ್ದಾರೆ.

ಮುಂಬೈ: 2016ರಲ್ಲಿ ನೋಟು ಅನಾಣ್ಯೀಕರಣ ನಂತರ ಭಾರತೀಯ ವಾಯುಪಡೆ 625 ಟನ್ ಗಳಷ್ಟು ಹೊಸ ನೋಟುಗಳನ್ನು ದೇಶದ ವಿವಿಧ ಕಡೆಗಳಿಗೆ ಸಾಗಾಟ ಮಾಡಿದೆ ಎಂದು ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ ಎಸ್ ಧನೋವಾ ಹೇಳಿದ್ದಾರೆ.


2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು ಸಾವಿರ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರು.
ಮುಂಬೈಯ ಐಐಟಿ ಆಯೋಜಿಸಿದ್ದ ಟೆಕ್ ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ಅನಾಣ್ಯೀಕರಣಗೊಂಡ ನಂತರ ನಾವು ಹೊಸ ನೋಟುಗಳನ್ನು ಸಾಗಾಟ ಮಾಡಿದೆವು. ಒಂದು ಕೋಟಿ ರೂಪಾಯಿ 20 ಕೆಜಿಯಂತೆ ಆಂತರಿಕ ಸೇವೆಯಾಗಿ ಭಾರತೀಯ ವಾಯುಪಡೆ 625 ಟನ್ ಗಳಷ್ಟು ನೋಟುಗಳನ್ನು ಸಾಗಾಟ ಮಾಡಿದೆವು ಎಂದಿದ್ದಾರೆ.


ಧನೋವಾ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಡಿಸೆಂಬರ್ 31, 2016ರಿಂದ 2019 ಸೆಪ್ಟೆಂಬರ್ 30ರವರೆಗೆ ಸೇವೆ ಸಲ್ಲಿಸಿದ್ದಾರೆ.


ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿನ ವಿವಾದದ ಬಗ್ಗೆ ಮಾತನಾಡಿದ ಅವರು, ಅಂತಹ ವಿವಾದಗಳು ರಕ್ಷಣಾ ಸ್ವಾಧೀನಗಳನ್ನು ನಿಧಾನಗೊಳಿಸುತ್ತವೆ, ಇದು ಸಶಸ್ತ್ರ ಪಡೆಗಳ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಬೋಫೋರ್ಸ್ ಗನ್ ಗಳು ಚೆನ್ನಾಗಿದ್ದರೂ ಕೂಡ ರಾಜೀವ್ ಗಾಂಧಿ ಸರ್ಕಾರದಲ್ಲಿ ಕೂಡ ಬೋಫೋರ್ಸ್ ಹಗರಣ ವಿವಾದಕ್ಕೆಡೆ ಮಾಡಿಕೊಟ್ಟಿತ್ತು ಎಂದರು. 


ಬಾಲಾಕೋಟ್ ವಾಯುದಾಳಿ ನಂತರ ಭಾರತ-ಪಾಕಿಸ್ತಾನ ನಿಲುವಿನ ಸಮಯದಲ್ಲಿ ಮಿಗ್ 21 ಬದಲಿಗೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರಫೆಲ್ ಯುದ್ಧ ವಿಮಾನ ಹಾರಾಟ ನಡೆಸಿದ್ದರೆ ಪರಿಸ್ಥಿತಿ ಬೇರೆಯೇ ಆಗಿತ್ತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT