ಮಲ್ಲಿಕಾರ್ಜುನ ಖರ್ಗೆ 
ದೇಶ

'ಮಹಾ'ಕಾಂಗ್ರೆಸ್ ನಲ್ಲಿ ಅಸಮಾಧಾನ: ಶಮನಗೊಳಿಸುವ ಹೊಣೆ ಖರ್ಗೆ ಹೆಗಲಿಗೆ ಹಾಕಿದ ಸೋನಿಯಾ ಗಾಂಧಿ 

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತೀಯ ಭುಗಿಲೆದ್ದಿದ್ದು ಇದನ್ನು ತಣಿಸುವ ಹೊಣೆಯನ್ನು ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಮಲ್ಲಿಕಾರ್ಜುವ ಖರ್ಗೆಯವರ ಹೆಗಲಿಗೆ ಹಾಕಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತೀಯ ಭುಗಿಲೆದ್ದಿದ್ದು ಇದನ್ನು ತಣಿಸುವ ಹೊಣೆಯನ್ನು ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಮಲ್ಲಿಕಾರ್ಜುವ ಖರ್ಗೆಯವರ ಹೆಗಲಿಗೆ ಹಾಕಿದ್ದಾರೆ.


ತಮಗೆ ಸಿಕ್ಕಿರುವ ಖಾತೆಯಿಂದ ಅಸಮಾಧಾನಗೊಂಡಿರುವ ವಿಜಯ್ ವಡೆಟ್ಟಿವಾರ್ ನಿನ್ನೆ ನಡೆದ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನಕ್ಕೆ ಗೈರಾಗಿದ್ದರು. ಹಿಂದುಳಿದ ವರ್ಗಗಳು, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಖಾತೆ ನೀಡಲಾಗಿದೆ.

ವಡೆಟ್ಟಿವಾರ್ ಹಿಂದಿನ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದರು. ಈ ಬಾರಿ ದೊಡ್ಡ ಖಾತೆಯ ನಿರೀಕ್ಷೆಯಲ್ಲಿದ್ದರು. ಅಸಮಾಧಾನಗೊಂಡ ಅವರನ್ನು ಸಮಾಧಾನ ಮಾಡಲು ಕಾಂಗ್ರೆಸ್ ಹಿರಿಯ ನಾಯಕರಾದ ನಾಸಿಮ್ ಖಾನ್, ಸುನಿಲ್ ಕೇದಾರ್ ಭೇಟಿ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಸಹ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.


ಕಿರಿಯ ಸಚಿವರುಗಳಿಗೆ ಅನೇಕ ಉತ್ತಮ ಖಾತೆಗಳು ಸಿಕ್ಕಿ ತಮಗೆ ಅಷ್ಟೊಂದು ಮಹತ್ವವಲ್ಲದ ಖಾತೆ ಸಿಕ್ಕಿದೆ ಎಂಬುದು ವಡೆಟ್ಟಿವರ್ ಅಸಮಾಧಾನಕ್ಕೆ ಕಾರಣವಾಗಿದೆ. ಅವರನ್ನು ಸಮಾಧಾನಪಡಿಸಲು ಕೆಲವು ಮಹತ್ವದ ಇಲಾಖೆಗಳನ್ನು ಈಗಿರುವುದರ ಜೊತೆಗೆ ನೀಡಬಹುದಾಗಿತ್ತು ಎಂದು ಅವರ ನಿಕಟವರ್ತಿಗಳು ಹೇಳುತ್ತಾರೆ.


ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ತೊರಟ್, ಕಾಂಗ್ರೆಸ್ ನಾಯಕರ ಮಧ್ಯೆ ಅಸಮಾಧಾನ ಇದೆ. ಮಹಾರಾಷ್ಟ್ರ ವಿಕಾಸ ಅಘಾಡಿಯ ಭಾಗವಾಗಿರುವ ನಾವು 42 ಸಚಿವ ಖಾತೆಗಳಲ್ಲಿ ನಮಗೆ 12 ಖಾತೆಗಳು ಸಿಕ್ಕಿವೆ. ವಾಸ್ತವವನ್ನು ನಮ್ಮ ರಾಜಕಾರಣಿಗಳು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದರು.


ಪುಣೆಯ ಕಾಂಗ್ರೆಸ್ ಶಾಸಕ ಸಂಗ್ರಮ್ ತೊಪ್ಟೆ ಅವರಿಗೆ ಸಚಿವ ಹುದ್ದೆ ಸಿಕ್ಕಿಲ್ಲ ಎಂಬ ಬೇಸರವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು: ರಾಷ್ಟ್ರೀಯ 'ಪಲ್ಸ್ ಪೋಲಿಯೊ ಲಸಿಕಾ' ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ರಾಜ್ಯದಲ್ಲಿ 'ಸೀಸನಲ್ ಫ್ಲೂ' ಹೆಚ್ಚಳ ಹಿನ್ನೆಲೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

video| ಹವಾಮಾನ ಬದಲಾವಣೆ: ಸುಡುವ ಮರಳುಗಾಡಲ್ಲಿ ಕಂಡು ಕೇಳರಿಯದ ಹಿಮಪಾತ!

Epstein files: ನ್ಯಾಯಾಂಗ ಇಲಾಖೆ ವೆಬ್‌ಪುಟದಿಂದ ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ಕಣ್ಮರೆ..!

ಕೋಳಿ ಪಂದ್ಯ ಅಡ್ಡೆ ಮೇಲೆ ಪೊಲೀಸರ ದಾಳಿ: ಪುತ್ತೂರು MLA ಸೇರಿ 16 ಮಂದಿ ವಿರುದ್ಧ ಕೇಸ್ ದಾಖಲು!

SCROLL FOR NEXT