ದೇಶ

ಗರ್ಭಿಣಿ ಪತ್ನಿಯ ಹತ್ಯೆ: ಭ್ರೂಣವನ್ನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿ! 

Srinivas Rao BV

ರಾಯ್ ಬರೇಲಿ: ಗರ್ಭಿಣಿ ಪತ್ನಿಯನ್ನು ಹತ್ಯೆ ಮಾಡಿ ಭ್ರೂಣವನ್ನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. 

ಜ.04 ರಂದು ಈ ಹತ್ಯೆ ಸಂಭವಿಸಿದೆ. ಆದರೆ ಜ.14 ರಂದು ಪ್ರಕರಣ ಬೆಳಕಿಗೆ ಬಂದಿದೆ. ಹತ್ಯೆಯ ಘಟನೆಗೆ ಸಾಕ್ಷಿಯಾಗಿದ್ದ ಸಂತ್ರಸ್ತೆ ಊರ್ಮಿಳಾ ಅವರ ಹಿರಿಯ ಮಗಳು ತಾಯಿಯ ತವರುಮನೆಗೆ ತೆರಳಿ ಘಟನೆಯನ್ನು ವಿವರಿಸಿದ್ದಾಳೆ. ಈ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ. 

ಕುಟುಂಬ ಸದಸ್ಯರ ದೂರನ್ನು ಆಧರಿಸಿ ಪೊಲೀಸರು ಹತ್ಯೆಯ ಆರೋಪಿ ರವೀಂದ್ರ ಕುಮಾರ್ (35) ನ್ನು ಬಂಧಿಸಿದ್ದಾರೆ. ಆರೋಪಿ ರವೀಂದ್ರ ಕುಮಾರ್ ಮತ್ತು ಊರ್ಮಿಳಾ 2011 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ ರವೀಂದ್ರ ಕುಮಾರ್ ಮನೆಯಲ್ಲಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಬಾರಿಯೂ ಊರ್ಮಿಳ ಹೆಣ್ಣುಮಗುವಿಗೆ ಜನ್ಮ ನೀಡಬಹುದೆಂದು ಶಂಕಿಸಿ ಆಕೆಯನ್ನು ಹತ್ಯೆ ಮಾಡಿ ದೇಹ, ಭ್ರೂಣವನ್ನು ತುಂಡು ತುಂಡಾಗಿ ಕತ್ತರಿಸಿ, ದಹನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಿಕ್ಕ ಸಾಕ್ಶ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.

SCROLL FOR NEXT