ದೇಶ

ತೆರಿಗೆ ವಂಚನೆ ಪ್ರಕರಣ: ಕಾರ್ತಿ ಚಿದಂಬರಂ ಗೆ ತಾತ್ಕಾಲಿಕ ರಿಲೀಫ್

Srinivas Rao BV

ಚೆನ್ನೈ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧದ ದೋಷಾರೋಪಣೆ ತಯಾರಿಸುವ ಪ್ರಕ್ರಿಯೆಗೆ ನೀಡಿರುವ ತಡೆಯಾಜ್ಞೆಯನ್ನು ಮದ್ರಾಸ್ ಹೈಕೋರ್ಟ್ ಫೆ. 12ರವರೆಗೆ ವಿಸ್ತರಿಸಿದೆ. 

ತಮ್ಮ ವಿರುದ್ಧ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಕಾರ್ತಿ ಚಿದಂಬರಂ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

ಈ ಹಿಂದೆ ವಿಶೇಷ ನ್ಯಾಯಾಲಯ ಕಾರ್ತಿ ಚಿದಂಬರಂ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಚೆಸ್ ಗ್ಲೋಬಲ್ ಅಡ್ಬೈಸರಿ ಸರ್ವಿಸಸ್ ನಲ್ಲಿ ಜಪ್ತಿ ಮಾಡಿರುವ ಹಾರ್ಡ್ ಡ್ರೈವ್ ಗಳನ್ನು ಸಾಕ್ಷಿಯನ್ನು ಪರಿಗಣಿಸಲಾಗದು ಎಂಬ ಮನವಿಯನ್ನು ಕೂಡ ನ್ಯಾಯಾಲಯ ತಿರಸ್ಕರಿಸಿತ್ತು.

SCROLL FOR NEXT