ದೇಶ

ಕೇರಳ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲ ಮಂಗಳಮುಖಿ ಪತ್ರಕರ್ತೆ

Srinivasamurthy VN

ಎರ್ನಾಕುಲಂ: ಮೊದಲ ಮಂಗಳಮುಖಿ ಪತ್ರಕರ್ತೆ ಎಂದೇ ಖ್ಯಾತಿ ಪಡೆದಿದ್ದ ಹೈಡಿ ಸಾದಿಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಥರ್ವ ಮೋಹನ್​ ಜತೆ ನಿನ್ನೆ ಕೇರಳದ ಎರ್ನಾಕುಲಂನಲ್ಲಿ  ಹೈಡಿ ಸಾದಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಮೂಲಕ ಕೇರಳ ರಾಜ್ಯದಲ್ಲಿ ನಡೆದ ಮಂಗಳಮುಖಿಯೊಂದಿಗಿನ ನಾಲ್ಕನೇ ಮದುವೆ ಇದಾಗಿದೆ. ಈ ಮದುವೆ ವಿಶೇಷ ಕಾಯ್ದೆಯಡಿ ನೋಂದಣಿಯಾಗಿದೆ.

2018ರಲ್ಲಿ ಇಶಾನ್​ ಮತ್ತು ಸೂರ್ಯ ಎಂಬುವ ಮಂಗಳಮುಖಿಯ ಮದುವೆ ನಡೆದಿತ್ತು. ಇದು ವಿಶೇಷ ಕಾನೂನಿನಡಿ ನೋಂದಣಿಯಾಗಿದ್ದ ಮೊದಲ ಮದುವೆಯಾಗಿತ್ತು.

SCROLL FOR NEXT