ಶಾರ್ಜಿಲ್ ಇಮಾಮ್ 
ದೇಶ

ಬಿಹಾರ: ದೇಶದ್ರೋಹ ಪ್ರಕರಣ, ಸಿಎಎ ವಿರೋಧಿ ಹೋರಾಟಗಾರ ಶಾರ್ಜೀಲ್ ಇಮಾಮ್ ಬಂಧನ 

ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದಾಗಿ ಬೆಳಕಿಗೆ ಬಂದಿರುವ ವಿವಾದಾತ್ಮಾಕ ಜೆಎನ್ ಯು  ವಿದ್ಯಾರ್ಥಿ ಹಾಗೂ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರನ್ನು ದೇಹದ್ರೋಹ ಪ್ರಕರಣದಲ್ಲಿ ಜಿಹಾನ್ ಬಾದ್ ನಲ್ಲಿಂದು ಬಂಧಿಸಲಾಗಿದೆ

ಪಾಟ್ನಾ: ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದಾಗಿ ಬೆಳಕಿಗೆ ಬಂದಿರುವ ವಿವಾದಾತ್ಮಾಕ ಜೆಎನ್ ಯು  ವಿದ್ಯಾರ್ಥಿ ಹಾಗೂ ಹೋರಾಟಗಾರ ಶಾರ್ಜೀಲ್ ಇಮಾಮ್ ಅವರನ್ನು ದೇಹದ್ರೋಹ ಪ್ರಕರಣದಲ್ಲಿ ಜಿಹಾನ್ ಬಾದ್ ನಲ್ಲಿಂದು ಬಂಧಿಸಲಾಗಿದೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಾಕರಿ ಭಾಷಣದ ಆರೋಪದ ಮೇರೆಗೆ ದೇಹದ್ರೋಹ ಪ್ರಕರಣ ದಾಖಲಿಸಿದ್ದ ದೆಹಲಿ ಪೊಲೀಸರು ತಲೆಮರೆಸಿಕೊಂಡಿದ್ದ ಇಮಾಮ್ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. 

ಶಾರ್ಜೀಲ್ ಇಮಾಮ್ ನೇಪಾಳಕ್ಕೆ ಪಲಾಯನ ಮಾಡಿರಬೇಕೆಂದು ಪೊಲೀಸರು ಭಯಗೊಂಡಿದ್ದರು. ಒಂದು ವೇಳೆ ಅವರು ನೇಪಾಳಕ್ಕೆ ಪಲಾಯನ ಮಾಡಿದರೆ ಭಾರತಕ್ಕೆ ವಾಪಾಸ್ ತರುವುದು ಕಷ್ಟಕರವಾಗಲಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದರು. 
 
ಮುಂಬೈ, ದೆಹಲಿ, ಪಾಟ್ನಾ ಮತ್ತಿತರ ಕಡೆಗಳಲ್ಲಿ ದೆಹಲಿ ಪೊಲೀಸರ ತಂಡ  ಬಹುಹಂತದ ದಾಳಿ ನಡೆಸಿ ಇಮಾಮ್ ಅವರನ್ನು ಹುಡುಕುತ್ತಿದ್ದರು. ಆದರೆ, ಆತ ಸಿಕ್ಕಿರಲಿಲ್ಲ.  ಜನವರಿ 27ರಂದು ರಾತ್ರಿ 7ರಿಂದ 8 ಗಂಟೆ ಸಂದರ್ಭದ ಬಿಹಾರದ ಪುಲ್ವಾರಿಷರೀಫ್ ನಲ್ಲಿ ನಲ್ಲಿ ಶಾರ್ಜೀಲ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು ಎಂದು ಅವರು ಅಧಿಕಾರಿ ತಿಳಿಸಿದ್ದರು. 

ಶಾರ್ಜೀಲ್ ಬಂಧನಕ್ಕಾಗಿ ಐದು ತಂಡ ರಚಿಸಲಾಗಿದ್ದು,  ಮಹಾರಾಷ್ಟ್ರ, ದೆಹಲಿ, ಬಿಹಾರದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಆತನ ಅಡಗಿರುವ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಅವರ ಕುಟುಂಬ ಸದಸ್ಯರನ್ನು ಕೇಳಲಾಗಿದೆ ಎಂದು ದೆಹಲಿ ಪೊಲೀಸ್ ವಕ್ತಾರರು ಬೆಳಗ್ಗೆಯಷ್ಟೇ ಹೇಳಿಕೆ ನೀಡಿದ್ದರು. 

ಎನ್ ಆರ್ ಸಿ ಅನುಷ್ಠಾನ ಸ್ಥಗಿತ ಹಾಗೂ ಈಶಾನ್ಯ ರಾಜ್ಯವನ್ನು ಭಾರತದಿಂದ ವಿಭಜನೆ ಕುರಿತಂತೆ ಜನವರಿ 25 ರಂದು ಶಾರ್ಜೀಲ್ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿತ್ತು. ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆಯಲ್ಲಿ ದೆಹಲಿ ಅಪರಾಧ ವಿಭಾಗದ ಪೊಲೀಸರು  ಇಮಾಮ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT