ಸಿಎಂ ಪಿಣರಾಯಿ ವಿಜಯನ್ 
ದೇಶ

ಕೇರಳದ ತಿರುವನಂತಪುರದಲ್ಲಿ ಇನ್ನೊಂದು ವಾರ ಟ್ರಿಪಲ್ ಲಾಕ್ ಡೌನ್: ತುರ್ತು ಸೇವೆ ಹೊರತುಪಡಿಸಿ ಬೇರೆಲ್ಲಾ ಬಂದ್!

ಸ್ಥಳೀಯ ಸಂಪರ್ಕದಿಂದ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಅಲ್ಲಿನ ಸರ್ಕಾರ ಟ್ರಿಪಲ್ ಲಾಕ್ ಡೌನ್ (ಹೆಚ್ಚಿನ ನಿರ್ಬಂಧ) ಘೋಷಿಸಿ ಮುಂದಿನ ಒಂದು ವಾರ ನಗರವನ್ನು ಸಂಪೂರ್ಣ ಬಂದ್ ಮಾಡಿದೆ.

ತಿರುವನಂತಪುರಂ:ಸ್ಥಳೀಯ ಸಂಪರ್ಕದಿಂದ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಅಲ್ಲಿನ ಸರ್ಕಾರ ಟ್ರಿಪಲ್ ಲಾಕ್ ಡೌನ್(ಹೆಚ್ಚಿನ ನಿರ್ಬಂಧ) ಘೋಷಿಸಿ ಮುಂದಿನ ಒಂದು ವಾರ ನಗರವನ್ನು ಸಂಪೂರ್ಣ ಬಂದ್ ಮಾಡಿದೆ.

ಇಂದು ಸಂಜೆ 6 ಗಂಟೆಯಿಂದ ತ್ರಿವಳಿ ಲಾಕ್ ಡೌನ್ ತಿರುವನಂತಪುರ ನಗರದಲ್ಲಿ ಜಾರಿಗೆ ಬರಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ವೈದ್ಯಕೀಯ ತುರ್ತು ಹೊರತುಪಡಿಸಿ ನಗರದ ಜನತೆಯನ್ನು ಇನ್ನೊಂದು ವಾರ ಹೊರಗೆ ಬಿಡಲಾಗುವುದಿಲ್ಲ.

ಸರ್ಕಾರಿ, ಖಾಸಗಿ ಮತ್ತು ಸಚಿವಾಲಯ ಕಚೇರಿಗಳು ತಿರುವನಂತಪುರದಲ್ಲಿ ಇನ್ನೊಂದು ವಾರ ಮುಚ್ಚಿರುತ್ತವೆ. ಕೇವಲ ನಗರಕ್ಕೆ ತುರ್ತು ಕೆಲಸಗಳಿಗೆ ಬರುವವರಿಗೆ ಮಾತ್ರ ಇನ್ನೊಂದು ವಾರ ಅವಕಾಶವಿದ್ದು ಪುನಃ ಹೊರಗೆ ಹೋಗಲು ಸಾಧ್ಯವಿಲ್ಲ. ಯಾವುದೇ ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಬಿಡುವುದಿಲ್ಲ.

ನಗರದಲ್ಲಿ ನ್ಯಾಯಾಲಯಗಳು ಸಹ ಇನ್ನೊಂದು ವಾರ ಮುಚ್ಚಿರುತ್ತದೆ. ತುರ್ತು ವಿಚಾರಣೆ, ಜಾಮೀನು ಅರ್ಜಿ ಇತ್ಯಾದಿಗಳನ್ನು ಆನ್ ಲೈನ್ ನಲ್ಲಿ ನಡೆಸಲಾಗುತ್ತದೆ. ಜನರ ಬೇಡಿಕೆಗಳಿಗನುಗುಣವಾಗಿ ಪೊಲೀಸರೇ ವಸ್ತುಗಳನ್ನು ಜನರ ಮನೆಬಾಗಿಲಿಗೆ ತಂದು ಕೊಡಲಿದ್ದಾರೆ. ಸೇವೆಗಳನ್ನು ಪಡೆಯಲು ಜನರಿಗೆ ಇಂದು ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಅದನ್ನು ಪೊಲೀಸರು ಇಂದು ಸಾಯಂಕಾಲದೊಳಗೆ ತಿಳಿಸಲಿದ್ದಾರೆ. ಔಷಧಿ ಮಳಿಗೆಗಳು, ಆಸ್ಪತ್ರೆಗಳು ಮತ್ತು ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಸ್ಥಳೀಯ ಸಂಪರ್ಕದಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ನಿನ್ನೆ ರಾಜ್ಯದಲ್ಲಿ ವರದಿಯಾದ 38 ಪ್ರಕರಣಗಳಲ್ಲಿ 22 ತಿರುವನಂತಪುರದಲ್ಲೇ ಆಗಿವೆ. ಸ್ಥಳೀಯ ಮಟ್ಟದಲ್ಲಿ ವರದಿಯಾದ 22 ಪ್ರಕರಣಗಳಲ್ಲಿ 14 ಪ್ರಕರಣಗಳಲ್ಲಿ ಸೋಂಕು ಎಲ್ಲಿಂದ ತಗುಲಿತು ಎಂದೇ ಪತ್ತೆಯಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT