ಸಾಂದರ್ಭಿಕ ಚಿತ್ರ 
ದೇಶ

ಟೊಮೆಟೊ ಬೆಲೆ ದಿಢೀರ್ ಏರಿಕೆ: ಮಹಾನಗರಗಳಲ್ಲಿ ಕಿಲೋಗೆ 70 ರಿಂದ 80 ರೂ.

ಟೊಮೆಟೊ ಬೆಲೆ ನಗರ ಪ್ರದೇಶಗಳಲ್ಲಿ ಕಿಲೋಗೆ 70ರಿಂದ 80 ರೂಪಾಯಿಗಳವರೆಗೆ ಏರಿಕೆಯಾಗಿದೆ. ಈ ಬಾರಿ ಟೊಮೆಟೊ ಬೆಳೆ ಕಡಿಮೆಯಾಗಿರುವುದರಿಂದ ಮತ್ತು ಮಳೆ ಹೆಚ್ಚಾಗಿ ಕೊಳೆತು ಹೋಗಿ ಬೇಗನೆ ಹಾಳಾಗುವುದರಿಂದ ಬೆಲೆ ಹೆಚ್ಚಳವಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ನವದೆಹಲಿ: ಟೊಮೆಟೊ ಬೆಲೆ ನಗರ ಪ್ರದೇಶಗಳಲ್ಲಿ ಕಿಲೋಗೆ 70ರಿಂದ 80 ರೂಪಾಯಿಗಳವರೆಗೆ ಏರಿಕೆಯಾಗಿದೆ. ಈ ಬಾರಿ ಟೊಮೆಟೊ ಬೆಳೆ ಕಡಿಮೆಯಾಗಿರುವುದರಿಂದ ಮತ್ತು ಮಳೆ ಹೆಚ್ಚಾಗಿ ಕೊಳೆತು ಹೋಗಿ ಬೇಗನೆ ಹಾಳಾಗುವುದರಿಂದ ಬೆಲೆ ಹೆಚ್ಚಳವಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಸಚಿವಾಲಯದ ಇತ್ತೀಚಿನ ಅಂಕಿಅಂಶ ಪ್ರಕಾರ, ಬಹುತೇಕ ಮಹಾನಗರಗಳಲ್ಲಿ ತಿಂಗಳ ಹಿಂದೆ ಕೆಜಿಗೆ 20 ರೂಪಾಯಿಯಿದ್ದ ಟೊಮೆಟೊ ಬೆಲೆ ಈಗ 60 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಕೆಜಿಗೆ 70ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಗುರ್ಗಾಂವ್, ಗ್ಯಾಂಗ್ ಟಾಕ್, ಸಿಲಿಗುರಿ, ರಾಯ್ ಪುರ್ ಗಳಲ್ಲಿ 70 ರೂಪಾಯಿಗಳಿಗೆ ಏರಿಕೆಯಾದರೆ, ಗೋರಖ್ ಪುರ್, ಕೋಟಾ ಮತ್ತು ದಿಮಪುರ್ ಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಚೊಮೆಟೊ ಬೆಲೆ ಕೆಜಿಗೆ 80ರೂಪಾಯಿಗಳವರೆಗೆ ಹೋಗಿದೆ.

ಇನ್ನು ಟೊಮೆಟೊ ಹೆಚ್ಚಾಗಿ ಬೆಳೆಯುವ ರಾಜ್ಯಗಳಾದ ಹೈದರಾಬಾದ್ ನಲ್ಲಿ ಕೆಜಿ ಟೊಮೆಟೊ ಬೆಲೆ 37 ರೂಪಾಯಿಯಿದ್ದರೆ ಚೆನ್ನೈಯಲ್ಲಿ 40 ರೂಪಾಯಿ, ಬೆಂಗಳೂರಿನಲ್ಲಿ 46 ರೂಪಾಯಿಯಿದೆ.

ಸಾಮಾನ್ಯವಾಗಿ ಜುಲೈಯಿಂದ ಸೆಪ್ಟೆಂಬರ್ ವರೆಗೆ ಟೊಮೆಟೊ ಬೆಲೆ ತೀವ್ರ ಮಳೆಯಿರುವಾಗ ಹೆಚ್ಚಾಗುತ್ತದೆ. ಟೊಮೆಟೊ ಬೇಗನೆ ಹಾಳಾಗುವ ತರಕಾರಿಯಾಗಿರುವುದರಿಂದ ಮಳೆಗೆ ಕೊಳೆತು ಹೋಗುವುದರಿಂದ ಮತ್ತು ಕಡಿಮೆ ಇಳುವರಿಯಾಗುವುದರಿಂದ ಈ ಸಮಯದಲ್ಲಿ ಬೆಲೆ ಹೆಚ್ಚಾಗುತ್ತದೆ ಎಂದರು.

ಮಾರುಕಟ್ಟೆಗೆ ಪೂರೈಕೆ ಹೆಚ್ಚಾದಾಗ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಬರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT