ವಿಕಾಸ್ ದುಬೆ 
ದೇಶ

ಪಾತಕಿ ವಿಕಾಸ್ ದುಬೆ ಆಸ್ತಿಗಳ ಕುರಿತು ಜಾರಿ ನಿರ್ದೇಶನಾಲಯದಿಂದ ತನಿಖೆ ಆರಂಭ

ಕಾನ್ಪುರದಲ್ಲಿ ಶುಕ್ರವಾರ ಎಸ್‌ಟಿಎಫ್ ಎನ್‍ಕೌಂಟರ್‍ ನಲ್ಲಿ ಸಾವನ್ನಪ್ಪಿದ ಪಾತಕಿ ವಿಕಾಸ್ ದುಬೆ ಒಡೆತನದ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿದೆ. 

ಲಖನೌ: ಕಾನ್ಪುರದಲ್ಲಿ ಶುಕ್ರವಾರ ಎಸ್‌ಟಿಎಫ್ ಎನ್‍ಕೌಂಟರ್‍ ನಲ್ಲಿ ಸಾವನ್ನಪ್ಪಿದ ಪಾತಕಿ ವಿಕಾಸ್ ದುಬೆ ಒಡೆತನದ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿದೆ. 

ದುಬೆ, ಅವನ ಕುಟುಂಬ ಸದಸ್ಯರು ಮತ್ತು ಸಹಚರರ ಒಡೆತನದ ಆಸ್ತಿಗಳ ವಿವರಗಳನ್ನು ಇಡಿ ಕೋರಿದೆ.
ಉತ್ತರ ಪ್ರದೇಶದಲ್ಲಿ ಬೆನಾಮಿ ವಹಿವಾಟಿನಡಿ 11 ಮನೆಗಳು ಮತ್ತು 16 ಫ್ಲ್ಯಾಟ್‌ಗಳನ್ನು ದುಬೆ ಹೊಂದಿರುವ ಶಂಕೆ ಇದೆ ಎಂದು ಇಲ್ಲಿನ ಮೂಲಗಳು ತಿಳಿಸಿವೆ.

ಕಳೆದ ಮೂರು ವರ್ಷಗಳಲ್ಲಿ 14 ದೇಶಗಳಿಗೆ ಭೇಟಿ ನೀಡಿದ್ದು, ವಿದೇಶಗಳಲ್ಲೂ ಆಸ್ತಿಗಳನ್ನು ಹೊಂದಿರುವ ಸಾಧ್ಯೆ ಇದೆ. ಸದ್ಯ 11 ಮನೆಗಳು ಮತ್ತು 16 ಫ್ಲ್ಯಾಟ್‌ಗಳು ಅವನಿಗೆ ಸೇರಿವೆ ಎಂದು ವರದಿಯಾಗಿದೆ.

ಲಖನೌದ ಆರ್ಯನಗರದಲ್ಲಿ ಇತ್ತೀಚೆಗೆ ಅವನು ಖರೀದಿಸಿದ 23 ಕೋಟಿ ರೂ.ಮೌಲ್ಯದ ಬಂಗಲೆ ಇದರಲ್ಲಿ ಸೇರಿದೆ.
ಇನ್ನು, ವಿಕಾಸ್ ದುಬೆ ಸಹಚರರು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಥಾಯ್ಲೆಂಡ್‍ ನಲ್ಲಿ ಮನೆಗಳನ್ನು ಖರೀದಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ, 2002 ರ ನಿಬಂಧನೆಗಳ ಅಡಿ ಅಪರಾಧಿ ದುಬೆ, ಅವನ ಕುಟುಂಬ ಸದಸ್ಯರು ಮತ್ತು ಸಹಚರರ ಒಡೆತನದ ಸ್ಥಿರಾಸ್ತಿ ಮತ್ತು ಚರಾಸ್ತಿ ವಿವರಗಳನ್ನು ಸಂಗ್ರಹಿಸಲು ಅಧಿಕಾರಿಗೆ ನಿರ್ದೇಶನ ನೀಡುವಂತೆ ಕಾನ್ಪುರ ಪೊಲೀಸರಿಗೆ ಜುಲೈ 6 ರಂದು ಇಡಿ ಆದೇಶಿಸಿತ್ತು. 

ದುಬೆ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಸಹ ತನಿಖಾ ಸಂಸ್ಥೆ ಕೇಳಿದೆ. ಕೆಲ ಪ್ರಭಾವಿ ಉದ್ಯಮಿಗಳಿಗೆ ದುಬೆ ಹಣ ಅಕ್ರಮ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿರುವುದರಿಂದ ಆಸ್ತಿಗಳನ್ನು ತನಿಖೆ ಮಾಡಬೇಕು ಎಂದು ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ. 

60ಕ್ಕು ಹೆಚ್ಚು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದ ಪಾತಕಿ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗುರುವಾರ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಕಾನ್ಪುರದಲ್ಲಿ ಆರು ದಿನಗಳ ಹಿಂದೆ ದುಬೆ ಮತ್ತು ಆತನ ಸಹಚರರು ಎಂಟು ಪೊಲೀಸರನ್ನು ಹತ್ಯೆ ಮಾಡಿ ಆರು ಮಂದಿಯನ್ನು ಗಾಯಗೊಳಿಸಿದ್ದರು.

ಉಜ್ಜಯಿನಿಯಿಂದ ಕರೆತರುತ್ತಿದ್ದಾಗ ಬುಧವಾರ ಮುಂಜಾನೆ ಕಾನ್ಪುರ ಬಳಿ ಎನ್‍ಕೌಂಟರ್‍ ನಲ್ಲಿ ದುಬೆ ಹೆಣವಾಗಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT