ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿದ ಪ್ರಕಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಕೊಯಂಬತ್ತೂರಿನ ಪೊಡನೂರ್ ಪೊಲೀಸರು ಬಂಧಿಸಿದ್ದಾರೆ.
ಭಾರತ ಸೇನಾದ ಸದಸ್ಯ, ಚೆಟ್ಟಿಪಲಯಂ ರಸ್ತೆಯ 21 ವರ್ಷದ ಎಂ ಅರುಣ್ ಕೃಷ್ಣನ್ ಬಂಧಿತ ವ್ಯಕ್ತಿ. "ಅರುಣ್ ಕೃಷ್ಣನ್ ಭಾರತ್ ಸೇನಾದ ಕೊಯಂಬತ್ತೂರಿನ ದಕ್ಷಿಣ ಜಿಲ್ಲಾ ಸಂಘಟಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಡೆಪ್ಯುಟಿ ಕಮಿಷನರ್ ಜಿ ಸ್ಟಾಲಿನ್ ಹೇಳಿದ್ದಾರೆ.
ಸಮಾಜದಲ್ಲಿ ಗಲಭೆ ಉಂಟುಮಾಡುವ ಉದ್ದೇಶ 153 ಸೆಕ್ಷನ್ 153 A, ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸುವ ಆರೋಪದಡಿ ಸೆಕ್ಷನ್ 504 ರ ಅಡಿಯಲ್ಲಿ ಅರುಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸುಂದರ್ ಪುರಂ ನ ಅಯ್ಯರ್ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಇರುವ ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇದರಿಂದಾಗಿ ಪೆರಿಯಾರ್ ಗೆ ಅವಮಾನವಾಗಿದೆ ಎಂದು ದ್ರಾವಿಡಾರ್ ಕಳಗಂ ಹಾಗೂ ತಂಥಿ ಪೆರಿಯಾರ್ ದ್ರಾವಿಡಾರ್ ಕಳಗಂ ಸಂಘಟನೆಯ ಸದಸ್ಯರು ಆರೋಪಿಸಿ ಈ ಕೃತ್ಯಕ್ಕೆ ಕಾರಣವಾದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.