ದೇಶ

ರಾಜಸ್ಥಾನ: ಸಚಿನ್ ಪೈಲಟ್ ಬಣದ 18 ಶಾಸಕರು ಬೆಂಗಳೂರಿನಲ್ಲಿ ವಾಸ್ತವ್ಯದ ಮಾಹಿತಿ?

Nagaraja AB

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ  ವಿಶ್ವಾಸಮತ ಯಾಚನೆಗೆ ಅವಕಾಶ  ಕೇಳಿದ್ದಾರೆ.ಈ ನಡುವೆಯೇ 18 ಜನ ಸಚಿನ್ ಪೈಲಟ್ ಬಣದ ಕಾಂಗ್ರೆಸ್ ಶಾಸಕರು ನಿನ್ನೆ ಸಂಜೆ ಯಿಂದ ನಾಪತ್ತೆಯಾಗಿದ್ದು ಕರ್ನಾಟಕದ ರಾಜಧಾನಿ ಆಗಮಿಸಿದ್ದಾರೆಂಬ ಮಾಹಿತಿ ಇದೆ.

ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡಿದ್ದ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಎಂಬ ಇಬ್ಬರು ಶಾಸಕರು ಬಿಜೆಪಿ ಸೇರುವ ಬಗ್ಗೆ ಬಿಜೆಪಿ ನಾಯಕ ಗಜೇಂದ್ರ ಶೇಖಾವತ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆಗೊಳಿತ್ತು.

ಈ ಸಂಬಂದ ಇಬ್ಬರನ್ನೂ ಪಕ್ಷ ದಿಂದಲೇ ಉಚ್ಚಾಟಿಸಿದ್ದು,ಈ ಬೆಳವಣಿಗೆಯಿಂದಲೂ ಸಚಿನ್ ಪೈಲಟ್ ಬಣದ 18 ಜನ ಶಾಸಕರು ಬಹುಮತ ಯಾಚನೆಗೂ  ಮುನ್ನ ರಾಜಸ್ಥಾವನ್ನು ತೊರೆದು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆಂದು ಮಾಹಿತಿ ಇದೆ.

SCROLL FOR NEXT