ದೇಶ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಜುಲೈ 23ರಂದು ಮನೋಹರ್ ಜೋಷಿ, ಜುಲೈ 24ರಂದು ಅಡ್ವಾಣಿ ವಿಚಾರಣೆ 

Vishwanath S

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಹೇಳಿಕೆಯನ್ನು ಇದೇ ತಿಂಗಳು ದಾಖಲಿಸಲಾಗುವುದು ಎಂದು ವಿಶೇಷ ಸಿಬಿಐ ನ್ಯಾಯಾಲಯ ತಿಳಿಸಿದೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ ಜುಲೈ 23ರಂದು ಮುರಳಿ ಮನೋಹರ್ ಜೋಷಿ ಹಾಗೂ ಜುಲೈ 24ರಂದು ಎಲ್ ಕೆ ಅಡ್ವಾಣಿ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ(ಸಿಆರ್ಪಿಸಿ) ಕಲಂ 313ರ ಅನುಸಾರ ಹೇಳಿಕೆಯನ್ನು ವಿಶೇಷ ನ್ಯಾಯಾಲಯ ದಾಖಲಿಸಿಕೊಳ್ಳಲಿದೆ. 

ಇದೇ ಪ್ರಕರಣ ಸಂಬಂಧ ಶಿವಸೇನಾ ಮುಖಂಡ ಸತೀಶ್ ಪ್ರಧಾನ್ ಅವರು ವಿಚಾರಣೆ ಜುಲೈ 22ರಂದು ದಾಖಲಿಸುವ ಸಾಧ್ಯತೆ ಇದೆ.

SCROLL FOR NEXT