ದೇಶ

ರಾಜಸ್ಥಾನ ಬಿಕ್ಕಟ್ಟು: ಬಂಡಾಯ ಶಾಸಕರೊಂದಿಗೆ ಮಾತುಕತೆಗೆ ಕಾಂಗ್ರೆಸ್ ಸಿದ್ಧ- ಅವಿನಾಶ್ ಪಾಂಡೆ

Nagaraja AB

ಜೈಪುರ:  ಸಚಿನ್ ಪೈಲಟ್ ಬಣದ ಶಾಸಕರ ಅನರ್ಹತೆ ಕುರಿತಂತೆ ಹೈಕೋರ್ಟ್ ಇಂದು ತೀರ್ಪು ನೀಡುವ ಸಾಧ್ಯತೆ ಇದೆ. ಒಂದು ವೇಳೆ ತೀರ್ಪು ಸ್ಪೀಕರ್ ನೋಟಿಸ್ ಪರವಾಗಿ ಬಿದ್ದರೂ ಬಂಡಾಯ ಶಾಸಕರೊಂದಿಗೆ ಮಾತುಕತೆ ನಡೆಸಲು ಕಾಂಗ್ರೆಸ್ ಸಿದ್ಧವಿರುವುದಾಗಿ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.

ಬಂಡಾಯ ಶಾಸಕರು  ಸ್ಪೀಕರ್ ಮುಂದೆ ಹಾಜರಾಗಲು ಇಂದಿನವರೆಗೂ ಸಮಯಾವಕಾಶವಿದೆ ಎಂದಿರುವ ಅವಿನಾಶ್ ಪಾಂಡೆ, ಗೆಹ್ಲೋಟ್ ಸರ್ಕಾರವನ್ನು ಪತನಗೊಳಿಸುವ ಬಿಜೆಪಿಯ  ಸಂಚು ವಿಫಲವಾಗಲಿದೆ. ಗೆಹ್ಲೋಟ್ ಗೆ ಸಂಪೂರ್ಣ ಬಹುಮತವಿದೆ. ಅವರು ಅಧಿಕಾರವನ್ನು ಪೂರ್ಣಗೊಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ರಾಜಸ್ಥಾನ ಕಾಂಗ್ರೆಸ್ ಇಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಆದರೆ, ಸಭೆಯ ಅಜೆಂಡಾ ಇನ್ನೂ ಗೊತ್ತಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕಳೆದ ಒಂದು ವಾರದ ಅಂತರದಲ್ಲಿ ನಡೆಯುತ್ತಿರುವ ಮೂರನೇ ಕಾಂಗ್ರೆಸ್ ಶಾಸಕಾಂಗ ಸಭೆ ಇದಾಗಿದೆ.

SCROLL FOR NEXT