ಶಿವ ಪ್ರತಾಪ್ ಶುಕ್ಲಾ 
ದೇಶ

ರಾಜ್ಯಸಭಾ ನೀತಿ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸಂಸದ ಶಿವ ಪ್ರತಾಪ್ ಶುಕ್ಲಾ ನೇಮಕ 

ರಾಜ್ಯ ಸಭೆಯ ನೀತಿ ಸಮಿತಿ ಅಧ್ಯಯಕ್ಷರಾಗಿ ಬಿಜೆಪಿ ಸಂಸದ ಶಿವ ಪ್ರತಾಪ್ ಶುಕ್ಲಾ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸಭಾ ಪ್ರಧಾನ ಕಾರ್ಯದರ್ಶಿ  ದೇಶ್ ದೀಪಕ್  ವರ್ಮಾ ತಿಳಿಸಿದ್ದಾರೆ.

ನವದೆಹಲಿ: ರಾಜ್ಯ ಸಭೆಯ ನೀತಿ ಸಮಿತಿ ಅಧ್ಯಯಕ್ಷರಾಗಿ ಬಿಜೆಪಿ ಸಂಸದ ಶಿವ ಪ್ರತಾಪ್ ಶುಕ್ಲಾ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸಭಾ ಪ್ರಧಾನ ಕಾರ್ಯದರ್ಶಿ  ದೇಶ್ ದೀಪಕ್  ವರ್ಮಾ ತಿಳಿಸಿದ್ದಾರೆ.

ಗುರುವಾರ ಬಿಡುಗಡೆ ಮಾಡಿರುವ ಸಂಸದೀಯ ಬುಲೆಟಿನ್ ನಲ್ಲಿ ಈ ವಿಷಯ ತಿಳಿಸಿದ್ದಾರೆ.  ಶುಕ್ಲಾ ಅವರನ್ನು ಬಿಟ್ಟು ಇತ್ತೀಚೆಗೆ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನೀತಿ ಸಮಿತಿಗೆ ಮೂವರನ್ನು ನೇಮಿಸಿದ್ದರು. ಡಿಎಂಕೆಯ ತಿರುಚ್ಚಿ ಶಿವ, ಟಿಆರ್ ಎಸ್ ನ ಡಾ.ಕೇಶವ ರಾವ್, ಮತ್ತು ವೈಆರ್ ಎಲ್ ಕಾಂಗ್ರೆಸ್ ವಿ ವಿಜಯ ರೆಡ್ಡಿ ಅವರನ್ನು ನೇಮಿಸಿದ್ದರು.

ಶುಕ್ಲಾ ಅವರ ನೇಮಕದಿಂದ ರಾಜ್ಯಸಭೆ ನೀತಿ ಸಮಿತಿ ಸದಸ್ಯರ ಸಂಖ್ಯೆ 11 ಕ್ಕೇರಿದೆ, ಸಂಸದ ಆನಂದ್ ಶರ್ಮಾ, ರಾಮ್ ಗೋಪಾಲ್ ಯಾದವ್,ಎಂ ನವನೀತ್ ಕೃಷ್ಣನ್, ಡೆರೆಕ್ ಓ ಬ್ರೆನ್, ರಾಮ್ ಚಂದ್ರ, ಪ್ರಸನ್ನ ಆಚಾರ್ಯ ಮತ್ತು  ಬಿಜು ಅವರನ್ನು ನೇಮಿಸಲಾಗಿದೆ.

ಸಂಸದರ ವರ್ತನೆ ಮತ್ತು ಚಟುವಟಿಕೆಗಳ ವಿರುದ್ಧದ ದೂರುಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನೈತಿಕ ಸಮಿತಿಯು ಹೊಂದಿದೆ. ಜುಲೈ 21 ರಂದು ರಾಜ್ಯಸಭೆಯಲ್ಲಿ ಬಿಜೆಪಿ ಪಕ್ಷದ ಮುಖ್ಯ ಸಚೇತಕರಾಗಿ ಶುಕ್ಲಾ ಅವರನ್ನು ನೇಮಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT