ದೆಹಲಿ: ದೆಹಲಿಯ ದ್ವಾರಕಾ ಪ್ರದೇಶದಲ್ಲಿ 56 ವರ್ಷದ ಐಆರ್ಎಸ್ ಅಧಿಕಾರಿಯೊಬ್ಬರು 'ಆ್ಯಸಿಡ್ನತಿರುವ ದ್ರಾವಣ'ವೊಂದನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿವರಾಜ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ, ಇವರು ದೆಹಲಿಯ ಆರ್ ಕೆ ಪುರಂ ನ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕಾರಿನಲ್ಲೇ ಸಾವಿಗೆ ಶರಣಾಗಿದ್ದಾರೆ.
ಕುಟುಂಬದವರಿಗೆ ಕೋವಿಡ್-19 ಹರಡಲು ನಾನು ಕಾರಣ ಆಗಬಾರದು. ಅವರು ಸಂಕಷ್ಟ ಅನುಭವಿಸುವುದು ಇಷ್ಟವಿಲ್ಲ' ಎಂದು ಬರೆದಿರುವ ಟಿಪ್ಪಣಿಯೊಂದು ಕಾರಿನೊಳಗೆ ಪತ್ತೆಯಾಗಿದೆ.
ಆದರೆ ಅವರಿಗೆ ಕೊರೋನಾ ಸೋಂಕು ಇತ್ತೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಪೊಲೀಸರಿಗೆ ತಿಳಿದಿಲ್ಲ, ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.