ದೇಶ

ಕುಟುಂಬಸ್ಥರಿಗೆ ಕೊರೋನಾ ಹರಡುವ ಭೀತಿ: ಐಆರ್ ಎಸ್ ಅಧಿಕಾರಿ ಆತ್ಮಹತ್ಯೆ

Shilpa D

ದೆಹಲಿ: ದೆಹಲಿಯ ದ್ವಾರಕಾ ಪ್ರದೇಶದಲ್ಲಿ 56 ವರ್ಷದ ಐಆರ್‌ಎಸ್ ಅಧಿಕಾರಿಯೊಬ್ಬರು 'ಆ್ಯಸಿಡ್‌ನತಿರುವ ದ್ರಾವಣ'ವೊಂದನ್ನು ಸೇವಿಸಿ  ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಶಿವರಾಜ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ, ಇವರು ದೆಹಲಿಯ ಆರ್ ಕೆ ಪುರಂ ನ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಕಾರಿನಲ್ಲೇ ಸಾವಿಗೆ ಶರಣಾಗಿದ್ದಾರೆ.

ಕುಟುಂಬದವರಿಗೆ ಕೋವಿಡ್-19 ಹರಡಲು ನಾನು ಕಾರಣ ಆಗಬಾರದು. ಅವರು ಸಂಕಷ್ಟ ಅನುಭವಿಸುವುದು ಇಷ್ಟವಿಲ್ಲ' ಎಂದು ಬರೆದಿರುವ ಟಿಪ್ಪಣಿಯೊಂದು ಕಾರಿನೊಳಗೆ ಪತ್ತೆಯಾಗಿದೆ.  

ಆದರೆ ಅವರಿಗೆ ಕೊರೋನಾ ಸೋಂಕು ಇತ್ತೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಪೊಲೀಸರಿಗೆ ತಿಳಿದಿಲ್ಲ, ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

SCROLL FOR NEXT