ದೇಶ

ಎಚ್-1 ಬಿ ವೀಸಾ ನಿಷೇಧ: ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಕ್ರಮ ಮತ್ತು ಆರ್ಥಿಕತೆಗೆ ಹಾನಿಕಾರಕ': ನಾಸ್ಕಾಮ್

ಎಚ್-1 ಬಿ ವೀಸಾ ನಿಷೇಧಿಸಿರುವ ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಮತ್ತು ಅಮೆರಿಕ ಆರ್ಥಿಕತೆಗೆ ಹಾನಿಕಾರಕ ನಡೆಯಾಗಿದೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ ನಾಸ್ಕಾಮ್ ಹೇಳಿದೆ.

ನವದೆಹಲಿ: ಎಚ್-1 ಬಿ ವೀಸಾ ನಿಷೇಧಿಸಿರುವ ಅಮೆರಿಕ ಸರ್ಕಾರದ ಆದೇಶ 'ದಾರಿ ತಪ್ಪಿಸುವ ಮತ್ತು ಅಮೆರಿಕ ಆರ್ಥಿಕತೆಗೆ ಹಾನಿಕಾರಕ ನಡೆಯಾಗಿದೆ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ ನಾಸ್ಕಾಮ್ ಹೇಳಿದೆ.

ಅತ್ತ ಅಮೆರಿಕ ಸರ್ಕಾರ ಹೆಚ್-1ಬಿ ವೀಸಾ ನಿಷೇಧಿಸಿದ ಬೆನ್ನಲ್ಲೇ ಇತ್ತ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನಾಸ್ಕಾಮ್, ಅಮೆರಿಕ ಸರ್ಕಾರದ ಆದೇಶದಿಂದಾಗಿ ವಿದೇಶಗಳಲ್ಲಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಾರೆ. ಅಂತೆಯೇ ಇದರಿಂದ ಅಮೆರಿಕ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು. ಸ್ಥಳೀಯ ಪ್ರತಿಭಾನ್ವಿತರ ಕೊರತೆ ಇದ್ದಾಗ ಉತ್ಪಾದನೆಯ ಮೇಲೆ ಹೊಡೆತ ಬೀಳುತ್ತದೆ. ಈಗಾಗಲೇ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಸಂಸ್ಥೆಗಳು ಮುಚ್ಚಲ್ಪಟ್ಟಿದ್ದು, ಯುಎಸ್ ಸಿಐಎಸ್ ಮತ್ತು ಡಿಒಎಸ್ ಕಚೇರಿಗಳ ಸ್ಥಗಿತದಿಂದಾಗಿ ವೀಸಾಗಳ ಪ್ರಕ್ರಿಯೆ ವಿಳಂಬವಾಗಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ ಎಂದು ನಾಸ್ಕಾಮ್ ಅಭಿಪ್ರಾಯಪಟ್ಟಿದೆ.

ಈಹಿಂದೆ, ನಾಸ್ಕಾಮ್, ಯು.ಎಸ್. ಚೇಂಬರ್ ಆಫ್ ಕಾಮರ್ಸ್, ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್, ಕಾಂಪೆಟ್ ಅಮೆರಿಕಾ, ನ್ಯಾಷನಲ್ ಅಸೋಸಿಯೇಷನ್ ಆಫ್ ಮ್ಯಾನ್ಯುಫ್ಯಾಕ್ಚರರ್ಸ್, ಮತ್ತು ಅಮೆರಿಕನ್ ಯೂನಿವರ್ಸಿಟೀಸ್ ಅಸೋಸಿಯೇಷನ್ ಸೇರಿದಂತೆ ವ್ಯಾಪಾರ ಮತ್ತು ಉದ್ಯಮ ಸಂಸ್ಥೆಗಳು ಟ್ರಂಪ್ ಮತ್ತು ಅವರ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಸರ್ಕಾರದ ಕಠಿಣ ನೀತಿಗಳಿಂದಾಗಿ ಉದ್ಯೋಗ ಸೃಷ್ಟಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಿರ್ಣಾಯಕ ಮೂಲಸೌಕರ್ಯ ಸೇವೆಗಳನ್ನು ಈ ನಿಬಂಧನೆಗಳು ತಡೆಯುತ್ತದೆ. ಹೀಗಾಗಿ ನೀತಿ ಬದಲಿಸುವಂತೆ ಮನವಿ ಮಾಡಿದ್ದವು.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಅಮೆರಿಕ ಕಂಪನಿಗಳ ಆದಾಯ ನೆಲಕಚ್ಚಿದ್ದು. ಈ ಹೊತ್ತಿನಲ್ಲಿ ಇಂತಹ ಕಠಿಣ ನಿರ್ಧಾರಗಳು ಮತ್ತಷ್ಟು ಮಾರಕವಾಗಿ ಪರಿಣಮಿಸುತ್ತವೆ. ಇದರಿಂದ ದೇಶದ ಆರ್ಥಿಕತೆ ಮೇಲೆ ಖಂಡಿತಾ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ಉತ್ಪಾದನೆ ಮತ್ತು ಮಾರಾಟ ಕುಸಿಯಲಿದೆ ಎಂದು ಹೇಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT