ಭಾರತ-ಚೀನಾ ಗಡಿಭಾಗ 
ದೇಶ

ಎಲ್ಎಸಿ ಉದ್ದಕ್ಕೂ ಮತ್ತೆ ಸೇನೆ ಸ್ಥಾಪನೆ, ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ ಚೀನಾ! 

ಗಲ್ವಾನ್ ಕಣಿವೆ ಘರ್ಷಣೆಯ ನಂತರವೂ ಉದ್ಧಟತನ ಬಿಡದ ಚೀನಾ ಮಾತುಕತೆ ನಡುವೆಯೇ ಎಲ್ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ, ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದೆ.

ಲಡಾಖ್: ಗಲ್ವಾನ್ ಕಣಿವೆ ಘರ್ಷಣೆಯ ನಂತರವೂ ಉದ್ಧಟತನ ಬಿಡದ ಚೀನಾ ಮಾತುಕತೆ ನಡುವೆಯೇ ಎಲ್ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ, ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದೆ.

ಫಿಂಗರ್ ಏರಿಯಾವೂ ಸೇರಿದಂತೆ ನಿರ್ಣಾಯಕ ಪ್ರದೇಶಗಳಲ್ಲಿ ಚೀನಾ ಹೆಚ್ಚು ಪ್ರದೇಶದೊಂದಿಗೆ ಹಾಗೂ ಹೆಚ್ಚು ನಿರ್ಮಾಣ ಕಾಮಗಾರಿ, ಸೇನಾ ನಿಯೋಜನೆ ಮಾಡುತ್ತಿದೆ. ಮೇ.4 ರಿಂದ ಈಶಾನ್ಯ ಲಡಾಖ್ ನಲ್ಲಿ ಎಲ್ಎಸಿಯ ಉದ್ದಕ್ಕೂ 10,000 ಸೇನಾ ಸಿಬ್ಬಂದಿಗಳ ನಿಯೋಜನೆ, ಬೃಹತ್ ಶಸ್ತ್ರಾಸ್ತ್ರಗಳು, ಡಿಫೆನ್ಸ್ ಬ್ಯಾಟರಿಗಳನ್ನು ಸ್ಥಾಪನೆ ಮಾಡಿದೆ.

ಪ್ಯಾಂಗಾಂಗ್ ತ್ಸೋ ನದಿಯ ಉದ್ದಕ್ಕೂ ಇರುವ ಫಿಂಗರ್ ಏರಿಯಾದ ಬಳಿ ಚೀನಾ ಸೇನಾ ಸಿಬ್ಬಂದಿಗಳ ನಿಯೋಜನೆ, ನಿರ್ಮಾಣ ಕಾಮಗಾರಿ ಸೇರಿದಂತೆ ತನ್ನ ಸೇನಾ ಚಟುವಟಿಕೆಗಳನ್ನು ಮುಂದುವರೆಸಿದೆ ಎಂದು ಎಎನ್ಐ ವರದಿ ಮೂಲಕ ತಿಳಿದುಬಂದಿದೆ.
ಭಾರತ ಫಿಂಗರ್ 8 ವರೆಗೂ ತನ್ನ ಹಕ್ಕು ಪ್ರತಿಪಾದನೆ ಮಾಡುತ್ತಿದೆ. ಆದರೆ ಇತ್ತೀಚಿನ ಚೀನಾದೊಂದಿಗಿನ ಘರ್ಷಣೆಯ ಬಳಿಕ ಚೀನಾ ಸೇನೆ ಭಾರತೀಯ ಗಸ್ತು ಸಿಬ್ಬಂದಿಗಳನ್ನು ಫಿಂಗರ್ 4 ನ್ನು ದಾಟಿ ಹೋಗದಂತೆ ನಿರ್ಬಂಧ ವಿಧಿಸುತ್ತಿದೆ.

ಚೀನಾ ಫಿಂಗರ್ ಏರಿಯಾಗಳಲ್ಲಿ ಹೊಸ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆಕ್ರಮಣಕಾರಿಯಾಗಿ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಘರ್ಷಣೆಯ ಸಂದರ್ಭಗಳಲ್ಲಿ ಜೂ.15-16 ರಂದು ರಾತ್ರಿ ಪ್ಯಾಟ್ರೋಲಿಂಘ್ ಪಾಯಿಂಟ್ 14 ರಲ್ಲಿ ಭಾರತೀಯ ಸೇನೆ ಧ್ವಂಸಗೊಳಿಸಿದ್ದ ಚೀನಾದ ವೀಕ್ಷಣಾ ಪೋಸ್ಟ್ ಗಳು ಮತ್ತೆ ತಲೆ ಎತ್ತಿವೆ. ಭಾರತದ ಪಿಪಿ-15, ಪಿಪಿ-17, ಪಿಪಿ-17A ಬಳಿ ಚೀನಾ ವೀಕ್ಷಣಾ ಪೋಸ್ಟ್ ಗಳು ಇನ್ನೂ ಹಾಗೆಯೇ ಅಸ್ತಿತ್ವದಲ್ಲಿದೆ, ಇದು ಭಾರತದ ಗಸ್ತು ಪಾಯಿಂಟ್ ಗಳು ಹಾಗೂ ಭಾರತದ ಕಡೆಗೆ ತನ್ನ ಸಿಬ್ಬಂದಿಗಳನ್ನು ಕಳಿಸುವುದಕ್ಕೆ ಸಹಕಾರಿಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT